Advertisement

ರಾಷ್ಟ್ರೀಯ ಹೆದ್ದಾರಿಗಳಿಗೆ ಕೇಂದ್ರದಿಂದ ಹೊಸ ಸ್ಪರ್ಶ

10:49 PM Aug 30, 2022 | Team Udayavani |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಡಿಮೆ ಖರ್ಚಿನಲ್ಲಿ ದೀರ್ಘ‌ಕಾಲ ಬಾಳಿಕೆ, ಸುರಕ್ಷತೆ ಒಳಗೊಂಡ ಉತ್ತಮ ಗುಣಮಟ್ಟದ ಮತ್ತು ತ್ವರಿತವಾಗಿ ಕಾಮಗಾರಿ ಪೂರ್ಣಗೊಳ್ಳುವ ನಿಟ್ಟಿನಲ್ಲಿ ಚಾಲ್ತಿಯಲ್ಲಿರುವ ಮತ್ತು ಮುಂಬರುವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ “ವಾಲ್ಯೂ ಎಂಜಿನಿಯರಿಂಗ್‌’ ಅಳವಡಿಸಲು ತೀರ್ಮಾನಿಸಿದೆ.

Advertisement

ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ), ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ(ಎನ್‌ಎಚ್‌ಐಡಿಸಿಎಲ್‌) ಮತ್ತು ಗಡಿ ರಸ್ತೆಗಳ ಸಂಸ್ಥೆ(ಬಿಆರ್‌ಒ)ಯ ಮುಖ್ಯಸ್ಥರು ಮತ್ತು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಈ ನೂತನ ಆದೇಶವು ದೇಶದಲ್ಲಿ ಚಾಲ್ತಿಯಲ್ಲಿರುವ ಹೆದ್ದಾರಿ, ಸುರಂಗ ಮತ್ತು ಸೇತುವೆ ನಿರ್ಮಾಣ ಕಾರ್ಯಗಳಿಗೆ ಅನ್ವಯವಾಗುತ್ತದೆ. ಯೋಜನೆಗಳಿಗಳಿಗೆ ಪರ್ಯಾಯ ವಿನ್ಯಾಸ, ಯೋಜನೆಗೆ ಕಡಿಮೆ ಖರ್ಚಿನ ಗುಣಮಟ್ಟದ ವಸ್ತುಗಳು ಮತ್ತು ತಂತ್ರಜ್ಞಾನ ಬಳಕೆ, ಸುದೀರ್ಘ‌ ಬಾಳಿಕೆ, ಸುರಕ್ಷತೆ, ಗುಣಮಟ್ಟಕ್ಕೆ ರಾಜಿಯಾಗದಂತೆ ತ್ವರಿತ ನಿರ್ಮಾಣ ಹಾಗೂ ಹವಾಮಾನ ಬದಲಾವಣೆಗೆ ಹೊಂದುಕೊಳ್ಳುವಂತೆ ನಿರ್ಮಾಣ ಮಾಡುವುದನ್ನು “ವಾಲ್ಯೂ ಎಂಜಿನಿಯರಿಂಗ್‌’ ಒಳಗೊಂಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next