Advertisement

ಶಾಲಾ-ಕಾಲೇಜಿನಲ್ಲಿ ದುಶ್ಚಟಗಳ ಬಗ್ಗೆ ಜಾಗೃತಿ ಅಗತ್ಯ

12:34 PM Nov 15, 2018 | |

ವಿಜಯಪುರ: ದುಶ್ಚಟಗಳಿಗೆ ಬಲಿಯಾಗುವುದರಿಂದ ಅನಾರೋಗ್ಯಕ್ಕೆ ತುತ್ತಾಗುವುದು ಮಾತ್ರವಲ್ಲದೇ ಬದುಕಿನಲ್ಲಿ ಬಹಳಷ್ಟು ತೊಂದರೆ ಅನುಭವಿ ಸಬೇಕಾಗುತ್ತದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಧರ್ಮೇಂದ್ರ ತಿಳಿಸಿದರು.

Advertisement

ಪಟ್ಟಣದ ಸರ್ಕಾರಿ ಬಾಲಕಿಯರ ಫ್ರೌಢಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಕ್ಯಾನ್ಸರ್‌ ಅರಿವು ಸಪ್ತಾಹ ಹಾಗೂ ದಿನಾಚರಣೆಯಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಅರಿವು : ಇಂದು ಯುವ ಸಮೂಹ ತಂಬಾಕು, ಮಾದಕ ದ್ರವ್ಯಗಳ ಸೇವನೆಗೆ ದಾಸರಾಗುವುದು ಹೆಚ್ಚುತ್ತಿದ್ದು ಇದರಿಂದ ಹೊರಬರಬೇಕು. ದುಶ್ಚಟಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಶಾಲಾ-ಕಾಲೇ ಜುಗಳಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕೆಂದು ತಿಳಿಸಿದರು.

ಕ್ಯಾನ್ಸರ್‌ ಅಂಟು ರೋಗವಲ್ಲ: ಕ್ಯಾನ್ಸರ್‌ ಎಂಬ ಮಹಾ ಮಾರಿಗೆ ತುತ್ತಾಗುವು ದಕ್ಕೂ ಮುನ್ನಾ ಜಾಗರೂಕರಾಗುವುದು ಮುಖ್ಯ. ಈ ಕಾಯಿಲೆ ಸಂಪೂರ್ಣವಾಗಿ ಗುಣಪಡಿಸ ಬಹುದು ಅಥವಾ ರೋಗಿಯ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು.

ಈ ಕಾಯಿಲೆ ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದಿಲ್ಲ. ಇದು ಅಂಟು ಕಾಯಿಲೆ ಅಲ್ಲ. ಕ್ಯಾನ್ಸರ್‌ ಉಂಟು ಮಾಡುವ ಕಾರಕಗಳಾದ ವೈರಸ್‌, ತಂಬಾಕು, ಮದ್ಯಪಾನ, ರಾಸಾಯನಿಕ ನಮ್ಮ ಶರೀರದಲ್ಲಿ ಕ್ಯಾನ್ಸರ್‌ ಮ್ಯುಟೇಶನ್‌ ಅನ್ನು ಉತ್ತೇಜಿಸುವ ಅಂಶಗಳಾಗಿವೆ. “ಯುವಕರು ಯಾವುದೇ ದುಶ್ಚಟ ಮೈಗೂಡಿ ಸಿಕೊಳ್ಳದೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕು. ಮಾದಕ ವಸ್ತು ಸಾಗಣೆ ಬಗ್ಗೆ ಮಾಹಿತಿ ಇದ್ದರೆ ಪೊಲೀಸರಿಗೆ ತಿಳಿಸಬೇಕು. ವಿದ್ಯಾರ್ಥಿಗಳಲ್ಲಿ ಶ್ರದ್ಧೆ ಇದ್ದರೆ ಮಾತ್ರ ಗುರಿ ಮುಟ್ಟಲು ಸಾಧ್ಯ’ ಎಂದರು.

Advertisement

ಚಿಕಿತ್ಸೆಗೆ ಗಮನಕೊಡಿ:ಜಿಲ್ಲಾ ಸಂಯೋಜಕರಾದ ಎನ್‌ಸಿಡಿ ಡಾ.ವಿಜಯಲಕ್ಷ್ಮೀ ಮಹಿಳೆಯರು ಗರ್ಭಕೋಶದ ಸೋಂಕಿನ ಅನಾರೋಗ್ಯಕ್ಕೀಡುವ ಸ್ಥಿತಿಯೇ ಹೆಚ್ಚು. ಆಕಸ್ಮಿಕವಾಗಿ ರಕ್ತಸ್ರಾವ ಆರಂಭ ವಾದರೆ ಹೆಚ್ಚಿನ ಪ್ರಮಾಣದಲ್ಲಿದ್ದರೇ ಕೂಡಲೇ ಚಿಕಿತ್ಸೆ ಅಗತ್ಯ. ಇದಕ್ಕೆ ಸೂಕ್ತ ಚಿಕಿತ್ಸೆ ಹಾಗೂ ಔಷಧಿಗಳ ಮುಖಾಂತರವೂ ಗುಣಪಡಿಸಲು ಸಾಧ್ಯ. ಸೋಂಕಿನಿಂದ ಮುಕ್ತವಾ ಗಲು ಔಷಧಿ ಮಾತ್ರೆಗಳ ಜತೆಗೆ ಹೆಚ್ಚಿನ ಚಿಕಿತ್ಸೆ ಕಡೆಗೆ ಗಮನ ಕೊಡಬೇಕು ಎಂದು ಹೇಳಿದರು.

ಕ್ಯಾನ್ಸರ್‌ ಕಾಯಿಲೆ ಬಾರದಂತೆ ಸಂಪೂರ್ಣವಾಗಿ ತಡೆಗಟ್ಟುವುದು ಅಸಾಧ್ಯ. ಆದರೆ ಕ್ಯಾನ್ಸರ್‌ಗೆ ಕಾರಣ ಆಗಬಹುದಾದ ಅಪಾಯಗಳನ್ನು ತಡೆಯ ಬಹುದು. ತಾಜಾ ಹಣ್ಣು ತರಕಾರಿ ಸೇವನೆ ನಮ್ಮ ಶರೀರದಲ್ಲಿನ ಸಾಮರ್ಥ್ಯ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಐಪಿಡಿಮಿಯಾಲಜಿಸ್ಟ್‌ ಡಾ.ವಿಜಯಲಕ್ಷ್ಮೀ, ಆರೋಗ್ಯ ಸಹಾಯಕ ಸುರೇಂದ್ರ, ಸಮುದಾಯ ಆಸ್ಪತ್ರೆ ಆಡಳಿತಾಧಿಕಾರಿ ಮಂಜುಳಾ, ಅಶ್ವತ್ಥಪ್ಪ, ಶಿಕ್ಷಕ ವೃಂದ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next