Advertisement

Gangolli: ಕೆಲಸಕ್ಕೆ ತೆರಳಿದ್ದ ವಿವಾಹಿತೆ ನಾಪತ್ತೆ

09:28 PM Aug 16, 2024 | Team Udayavani |

ಗಂಗೊಳ್ಳಿ: ಇಲ್ಲಿನ ನಿವಾಸಿ ಮಿಥುನ್‌ ಪುತ್ರನ್‌ ಅವರ ಪತ್ನಿ, ಕುಂದಾಪುರದ ಶಾಸ್ತ್ರಿ ಸರ್ಕಲ್‌ ಬಳಿಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ರೇಣುಕಾ ಖಾರ್ವಿ (32) ಅವರು ಆ. 12ರಂದು ಮನೆಯಿಂದ ಕೆಲಸಕ್ಕೆಂದು ಹೊರಟು ಹೋಗಿದ್ದವರು ಆ ಬಳಿಕ ನಾಪತ್ತೆಯಾಗಿದ್ದಾರೆ.

Advertisement

ಆ. 12ರಂದು ಬೆಳಗ್ಗೆ ಮನೆಯಿಂದ ಎಂದಿನಂತೆ ಹೊರಟು ಬಂದಿದ್ದು, ಸಂಜೆ ಪತಿ ಕರೆ ಮಾಡಿದಾಗ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಈ ಬಗ್ಗೆ ಮಳಿಗೆಯ ಮಾಲಕರಲ್ಲಿ ವಿಚಾರಿಸಿದಾಗ ಆ ದಿನ ಕೆಲಸಕ್ಕೆ ಬಂದಿಲ್ಲವೆಂದು ತಿಳಿಸಿದ್ದರು. ಆ. 13ರ ಬೆಳಗ್ಗೆ 11 ಗಂಟೆಗೆ ರೇಣುಕಾ ಅವರು ಸಹೋದರ ವಿನೋದ್‌ಗೆ ಕರೆ ಮಾಡಿ ಉಡುಪಿಯಲ್ಲಿರುವುದಾಗಿ ತಿಳಿಸಿದ್ದರು. ಆ ಬಳಿಕ ಮರಳಿ ಕೇಳಿದಾಗ ಬೆಂಗಳೂರಿನಲ್ಲಿದ್ದು, ನನ್ನನ್ನು ಹುಡುಕುವುದು ಬೇಡ ಎನ್ನುವುದಾಗಿ ತಿಳಿಸಿ, ಫೋನ್‌ ಸ್ವಿಚ್‌ ಆಫ್‌ ಮಾಡಿದ್ದರು.

ಪತಿ ಮಿಥುನ್‌ ಪುತ್ರನ್‌ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next