Advertisement

ಎ.ಮಣಿಮೇಖಲೈ ಕೆನರಾ ಬ್ಯಾಂಕ್‌ ಕಾರ್ಯನಿರ್ವಾಹಕ ನಿರ್ದೇಶಕಿ

01:17 AM Feb 13, 2019 | Team Udayavani |

ಬೆಂಗಳೂರು: ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ನ ನೂತನ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಎ. ಮಣಿ ಮೇಖಲೈ ಅವರು ಸೋಮವಾರ ಫೆ.11ರಂದು ಅಧಿಕಾರ ವಹಿಸಿ ಕೊಂಡಿದ್ದಾರೆ. ಈ ಹಿಂದೆ ವಿಜಯ ಬ್ಯಾಂಕಿನ ಮಹಾ ಪ್ರಬಂಧಕರಾಗಿ ಸೇವೆ ಸಲ್ಲಿಸಿದ್ದ ಮಣಿಮೇಖಲೈ, ಬೆಂಗಳೂರು ವಿಶ್ವವಿದ್ಯಾನಿಲಯದ ಬಿಸಿನೆಸ್‌ ಅಡ್ಮಿನಿಸ್ಟ್ರೇಷನ್‌ (ಮಾರುಕಟ್ಟೆ)ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

Advertisement

1998ರಲ್ಲಿ ವಿಜಯ ಬ್ಯಾಂಕಿನ ಅಧಿಕಾರಿಯಾಗಿ ಸೇರಿದ ಅವರು ಸತತ ಮೂರು ದಶಕ ಬ್ಯಾಂಕಿಂಗ್‌ ಕ್ಷೇತ್ರದ ಎಲ್ಲ ವಿಭಾಗಗಳಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವ ಪಡೆದಿದ್ದಾರೆ. ಶಾಖಾ ಮುಖ್ಯ ಸ್ಥರಾಗಿ, ವಲಯ ಮುಖ್ಯಸ್ಥ ರಾಗಿ ಹಾಗೂ ಕಾರ್ಪೋರೇಟ್‌ ಕಚೇರಿಯ ಪ್ರಮುಖ ವಿಭಾಗಗಳ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ. ಅಂತಿಮವಾಗಿ ವಿಜಯ ಬ್ಯಾಂಕ್‌ ಬೆಂಗಳೂರು ಉತ್ತರ ವಲಯದ ಜನರಲ್‌ ಮ್ಯಾನೇಜರ್‌ ಸೇವೆಯಲ್ಲಿದ್ದರು ಎಂದು ಕೆನರಾ ಬ್ಯಾಂಕ್‌ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next