Advertisement

ಮೀನಿಗೆ ಗಾಳ ಹಾಕಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

08:21 PM Jul 31, 2023 | Team Udayavani |

ಮಲ್ಪೆ: ಗಾಳ ಹಾಕಿ ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ಕೆಮ್ಮಣ್ಣು ಪಡುತೋನ್ಸೆಯ ನಿವಾಸಿ ರಾಘವೇಂದ್ರ ಪೂಜಾರಿ (44 ವ) ಅವರು ಮಲ್ಪೆ ಪಡುಕರೆ ಸಮುದ್ರ ತೀರದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

Advertisement

ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಅವರು 4 ವರ್ಷದಿಂದ ಕೆಲಸಕ್ಕೆ ಹೋಗುತ್ತಿರಲಿಲ್ಲ. ಬಿಡುವಿನ ವೇಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಿದ್ದ ಅವರು ಜು.29ರಂದು ಮೀನಿಗೆ ಗಾಳ ಹಾಕಲು ಹೋಗಿ ನಾಪತ್ತೆಯಾಗಿದ್ದರು.

ಗುಜ್ಜರ್‌ಬೆಟ್ಟು ರಾಘವೇಂದ್ರ ಭಜನಾ ಮಂದಿರದ ಹಿಂಭಾಗ ಕಡಲಕಿನಾರೆಯಲ್ಲಿ ಅವರ ಚಪ್ಪಲಿ, ಕೊಡೆ, ಮೊಬೈಲ್‌ ಫೋನ್‌ ದೊರಕಿದ್ದು ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿತ್ತು.

ಸೋಮವಾರ ಮಧ್ಯಾಹ್ನ 1 ಗಂಟೆಗೆ ಮಲ್ಪೆ ಪಡುಕರೆ ಭಾಗದಲ್ಲಿ ಸಮುದ್ರದಲ್ಲಿ ತೇಲುತ್ತಿರುವ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಸಮಾಜ ಸೇವಕ ಈಶ್ವರ ಮಲ್ಪೆ ಅವರು ಸಮುದ್ರತೀರದಲ್ಲಿ ತೇಲುತ್ತಿದ್ದ ಶವವನ್ನು ದಡಕ್ಕೆ ತಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next