Advertisement

ಚಾಲಕ ಅಸ್ವಸ್ಥಗೊಂಡು ಕಾರುಗಳಿಗೆ ಢಿಕ್ಕಿ ಹೊಡೆದ ಲಾರಿ

09:36 PM Mar 09, 2023 | Team Udayavani |

ಬಂಟ್ವಾಳ: ಲಾರಿ ಚಾಲನೆಯ ಸಂದರ್ಭದಲ್ಲೇ  ಚಾಲಕ ಅಸ್ವಸ್ಥಗೊಂಡು ಲಾರಿ ಹೆದ್ದಾರಿ ಬದಿ ನಿಲ್ಲಿಸಿದ್ದ ಕಾರುಗಳಿಗೆ ಢಿಕ್ಕಿ ಹೊಡೆದ ಘಟನೆ ಬುಧವಾರ ಬಿ.ಸಿ. ರೋಡಿನಲ್ಲಿ ನಡೆದಿದೆ.

Advertisement

ಮಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಲಾರಿಯು ಬಿ.ಸಿ. ರೋಡು ತಲುಪುತ್ತಿದ್ದಂತೆ ಚಾಲಕ ಲಕ್ಷ್ಮಣ್‌ಗೆ ಮೂರ್ಚೆ ರೋಗ ಕಾಣಿಸಿಕೊಂಡಿದೆ. ಈ ವೇಳೆ ಲಾರಿ ಪೆಟ್ರೋಲ್‌ ಬಂಕ್‌ ಒಂದಕ್ಕೆ ನುಗ್ಗಿ ಪೆಟ್ರೋಲ್‌ ಹಾಕುತ್ತಿದ್ದ ಕಾರಿನ ಜತೆಗೆ ಅಲ್ಲಿ ನಿಲ್ಲಿಸಿದ್ದ ಬೈಕ್‌ಗಳು ಹಾಗೂ ನ್ಯಾನೋ ಕಾರೊಂದಕ್ಕೆ ಢಿಕ್ಕಿ ಹೊಡೆದಿದೆ. ಘಟನೆಯಲ್ಲಿ ಜೀವಹಾನಿ ಉಂಟಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next