Advertisement

ಕಳಂಕಿತರಿಗೆ ಆಜೀವ ಚುನಾವಣಾ ನಿಷೇಧ ರಾಜಕೀಯ ನೈರ್ಮಲ್ಯಕ್ಕೆ ದಾರಿ

03:50 AM Mar 22, 2017 | Team Udayavani |

ಕಳಂಕಿತ ರಾಜಕಾರಣಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಶಾಶ್ವತವಾಗಿ ತಡೆಯುವ ನಿಯಮ ಜಾರಿಗೆ ಬಂದರೆ ದೇಶದ ರಾಜಕೀಯ ರಂಗದ ಬಹುಭಾಗ ನಿರ್ಮಲಗೊಳ್ಳುವುದರಲ್ಲಿ ಸಂಶಯವಿಲ್ಲ. ಆದರೆ ಈ ನಿಯಮ ದುರುಪಯೋಗ ಆಗದಂತೆ ತಡೆಯುವ ಹೊಣೆಯೂ ಇದೆ.

Advertisement

ಭಾರತದ ಶಾಸಕಾಂಗದ ಇತಿಹಾಸದಲ್ಲಿ 2013, ಜು.9ನ್ನು ಅತ್ಯಂತ ಮಹತ್ವದ ದಿನ ಎಂದು ಹೇಳಲಾಗುತ್ತದೆ. ನ್ಯಾಯಾಲಯ ಶಿಕ್ಷೆ ವಿಧಿಸಿದ ವ್ಯಕ್ತಿಗಳು ಶಿಕ್ಷೆಯ ಅವಧಿಯಲ್ಲಿ ಮತ್ತು ಬಳಿಕ ಆರು ವರ್ಷ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿ ಅಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ರಾಜಕೀಯದ ಅಪರಾಧೀಕರಣವನ್ನು ತಡೆಯುವಲ್ಲಿ ಇದು ಒಂದು ಮಹತ್ವದ ತೀರ್ಪಾಗಿತ್ತು. 

ಇದೀಗ ಇದರ ಮುಂದುವರಿದ ಭಾಗವಾಗಿ ಕಳಂಕಿತ ಜನಪ್ರತಿನಿಧಿಗಳಿಗೆ ಚುನಾವಣಾ ರಾಜಕೀಯದ ಬಾಗಿಲನ್ನು ಶಾಶ್ವತವಾಗಿ ಮುಚ್ಚುವ ದಶಕಗಳ ಹಿಂದಿನ ವಾದಕ್ಕೆ ಮರು ಜೀವ ಸಿಕ್ಕಿದೆ. ಇದಕ್ಕೆ ಕಾರಣವಾಗಿರುವುದು ಚುನಾವಣಾ ಆಯೋಗ ಸೋಮವಾರ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅಫಿಡವಿತ್‌. ಕಳಂಕಿತ ಜನಪ್ರತಿನಿಧಿಗಳನ್ನು ಚುನಾಧಿವಣೆಯಿಂದ ಆಜೀವ ಪರ್ಯಂತ ದೂರವಿಡುವುದಕ್ಕೆ ನಮ್ಮ ಸಹಮತವಿದೆ, ಅಪರಾಧ ಸಾಬೀಧಿತಾದವರು ಚುನಾಧಿವಣೆಗಳಲ್ಲಿ ಸ್ಪರ್ಧಿಸಲು ಅವಕಾಶ ಕೊಡಧಿಬಾರದು. ಚುನಾವಣೆಗಳಿಂದ ಅವರಿಗೆ ಆಜೀವ ನಿಷೇಧ ಹೇರುವ ಮೂಲಕ ರಾಜಕೀಯವನ್ನು ಸ್ವತ್ಛಗೊಳಿಧಿಸಬೇಕೆಂದು ಆಯೋಗ ಈ ಅಫಿಡವಿತ್‌ನಲ್ಲಿ ಹೇಳಿದೆ.

ಚುನಾವಣಾ ಆಯೋಗ ಮಾತ್ರಧಿವಲ್ಲದೆ ಮಾಜಿ ಚುನಾವಣಾ ಆಯುಕ್ತ ಜೆ. ಎಂ.ಲಿಂಗೊx ಹಾಗೂ ಕೆಲ ಎನ್‌ಜಿಒಗಳು ಕೂಡ ಅಪರಾಧಿಗಳು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಶಾಶ್ವತವಾಗಿ ನಿಷೇಧಿಸಬೇಕೆಂದು ಆಗ್ರಹಿಸಿ ಸುಪ್ರೀಂ ಕೋರ್ಟಿನಲ್ಲಿ ದಾವೆ ಹೂಡಿದ್ದಾರೆ. ಗಂಭೀರ ಅಪರಾಧ ಕೃತ್ಯಗಳನ್ನು ಎಸಗಿದವರು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ತಡೆಯುವ ಹೋರಾಟಕ್ಕೆ ದಶಕಗಳ ಹಿನ್ನೆಲೆಯಿದೆ. 2013ರ ಸುಪ್ರೀಂ ತೀರ್ಪು ಈ ಹೋರಾಟಕ್ಕೆ ಸಿಕ್ಕಿದ ಅರ್ಧ ಗೆಲುವಾಗಿತ್ತು. 

ಕಳಂಕಿತರು ಆಜೀವ ಪರ್ಯಂತ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ನಿಯಮ ಬಂದಾಗಲೇ ಈ ಹೋರಾಟ ಸಂಪೂರ್ಣ ಯಶಸ್ವಿಯಾಗಲು ಸಾಧ್ಯ. ಸುಪ್ರೀಂ ಕೋರ್ಟ್‌ ಈ ಒತ್ತಾಯವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆಗೆ ಪಂಚಸದಸ್ಯ ಪೀಠ ಸ್ಥಾಪಿಸುವುದಾಗಿ ಹೇಳಿರುವುದರಿಂದ ಮುಂದಿನ ಸಾರ್ವತ್ರಿಕ ಚುನಾವಣೆಗೆ ಮುನ್ನ ಸಕಾರಾತ್ಮಕ ತೀರ್ಪು ಪ್ರಕಟವಾಗಬಹುದು ಎಂಬ ನಿರೀಕ್ಷೆಯಿದೆ. ಆದರೆ ಈ ನಿಯಮ ರಾಜಕೀಯ ಜೀವನ ಹಾಳುಮಾಡಲು ಅಥವಾ ರಾಜಕೀಯ ಸೇಡು ತೀರಿಸಿಕೊಳ್ಳಲು ದುರುಪಯೋಗವಾಗದಂತೆ ಮಾಡುವ ಹೊಣೆಧಿಗಾರಿಕೆಯೂ ಇದೆ.

Advertisement

ಕಳಂಕಿತರು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಿದರೆ ಅವರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎನ್ನುವ ವಾದದಲ್ಲಿ ಹುರುಳಿಲ್ಲ. ಏಕೆಂದರೆ ಕಳಂಕಿತರು ತಮ್ಮ ಕೃತ್ಯದಿಂದ ಜನಪ್ರತಿನಿಧಿಗಳಾಗುವ ನೈತಿಕ ಹಕ್ಕನ್ನು ಕಳೆದುಕೊಂಡಿರುತ್ತಾರೆ ಹಾಗೂ ಪ್ರಜಾಪ್ರಭುತ್ವದ ಮೂಲಭೂತ ಆಶಯವನ್ನೇ ಉಲ್ಲಂ ಸಿರುತ್ತಾರೆ. ಕ್ರಿಮಿನಲ್‌ಗ‌ಳನ್ನು ಸಚಿವರನ್ನಾಗಿಸುವ ಕೆಟ್ಟ ಪರಂಪರೆ ಭಾರತ ಬಿಟ್ಟರೆ ಬೇರೆ ಯಾವ ದೇಶದಲ್ಲೂ ಇಲ್ಲ. 

ಕಳಂಕಿತ ವ್ಯಕ್ತಿತ್ವವೂ ಒಂದು ಹೆಗ್ಗಳಿಕೆ ಎಂದು ಭಾವಿಸಿ ಹೆಮ್ಮೆ ಪಡುವ ಜನರಿರುವ ದೇಶವಿದು. ಹೀಗಾಗಿ ಪುಂಡುಪೋಕರಿಗಳು, ಕಳ್ಳರು, ದರೋಡೆಕೋರರು, ಅತ್ಯಾಚಾರಿಗಳು ಮತ್ತು ಕೊಲೆಗಡುಕರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬರುವುದನ್ನು ನಾವು ಕಾಣುತ್ತಲೇ ಬಂದಿದ್ದೇವೆ. ಈ ನಿಯಮ ಅಂಗೀಕಾರಗೊಂಡು ಜಾರಿಗೆ ಬಂದರೆ ರಾಜಕೀಯ ರಂಗದ ಬಹುಭಾಗ ಸ್ವತ್ಛಗೊಳ್ಳುವುದರಲ್ಲಿ ಸಂಶಯವಿಲ್ಲ. ಆಗ ಸಚ್ಚಾರಿತ್ರ್ಯವುಳ್ಳವರು ಮಾತ್ರ ಜನಪ್ರತಿನಿಧಿಗಳಾಗಿ ಆರಿಸಿಬರುತ್ತಾರೆ. ಇದರ ಜತೆಗೆ ರಾಜಕಾರಣಿಗಳಿಗೆ ಕನಿಷ್ಠ ವಿದ್ಯಾರ್ಹತೆ ಮತ್ತು ನಿವೃತ್ತಿ ವಯೋಮಿತಿಯನ್ನು ನಿಗದಿಪಡಿಸುವ ಪ್ರಸ್ತಾವವೂ ಇದೆ. ಆದರೆ ಪೂರ್ಣವಾಗಿ ಶಾಸಕಾಂಗಕ್ಕೆ ಸಂಬಂಧಿಸಿದ ವಿಚಾರವಾಗಿರುವುದರಿಂದ ನ್ಯಾಯಾಲಯ ಮತ್ತು ಆಯೋಗ ಮಾತ್ರ ಈ ಬಗ್ಗೆ ತೀರ್ಮಾನ ಕೈಗೊಳ್ಳುವುದು ಅಸಾಧ್ಯ. ಸಂವಿಧಾನಕ್ಕೆ ತಿದ್ದುಪಡಿಯಾದರೆ ಮಾತ್ರ ಈ ನಿಯಮ ಜಾರಿಗೆ ಬರಬಹುದು. ಆದರೆ ಅದು ಜಾರಿಯಾಗಬೇಕೆನ್ನುವುದು ಬಹುಜನರ ಅಪೇಕ್ಷೆ.

Advertisement

Udayavani is now on Telegram. Click here to join our channel and stay updated with the latest news.

Next