Advertisement

ನ್ಯಾಯವಾದಿ ದಂಪತಿ ಮನೆಗೆ ಕನ್ನ

11:17 AM Jul 08, 2018 | Team Udayavani |

ಕಲಬುರಗಿ: ನ್ಯಾಯವಾದಿ ದಂಪತಿ ಮನೆಗೆ ನುಗ್ಗಿದ ಕಳ್ಳರು, ಮನೆಯಲ್ಲಿರುವ ಅಲ್ಮಾರಿ ಮುರಿದು 8 ತೊಲಿ ಬಂಗಾರ ಹಾಗೂ 30 ಸಾವಿರ ರೂ. ನಗದು ದೋಚಿದ ಘಟನೆ ನಗರದ ಖೂಬಾ ಪ್ಲಾಟ್‌ದಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ.

Advertisement

ಹಿರಿಯ ನ್ಯಾಯವಾದಿಗಳಾದ ಅನುರಾಧಾ ದೇಸಾಯಿ ಹಾಗೂ ಮಹಾಂತೇಶ ದೇಸಾಯಿ ಅವರಿರುವ ಶಂಕರ ಪಾಟೀಲ ಅವರಿಗೆ ಸೇರಿದ ಮನೆಯೇ ಕಳ್ಳತನಕ್ಕೀಡಾಗಿದ್ದು. ಮೊದಲನೇ ದಿನ ಬಾಗಿಲು ಮುರಿದು ಅಲ್ಮಾರಿ ಮುರಿಯಲು ಯತ್ನಿಸಿದಾರೂ ತೆರೆಯದಿದ್ದಕ್ಕೆ ಮರುದಿನ ಮಾರಕಾಸ್ತ್ರಗಳ ಸಮೇತ ಆಗಮಿಸಿ ಕಳ್ಳರು ತಮ್ಮ ಕೃತ್ಯ ಎಸಗಿದ್ದಾರೆ. ಕಳ್ಳರು ಮನೆಯಲ್ಲಿರುವಾಗ ಕಂಟ್ರೋಲ್‌ ರೂಂ ಹಾಗೂ ಸ್ಟೇಷನ್‌ ಬಜಾರ ಪೊಲೀಸ್‌ ಠಾಣೆಗೆ ತಿಳಿಸಿದ್ದರೂ ಪೊಲೀಸ್‌ರು ತಂಡದೊಂದಿಗೆ ಸಕಾಲಕ್ಕೆ ಬಾರದಿರುವುದು. ಮೊದಲು ಇಬ್ಬರು ಪೊಲೀಸ್‌ರು ಸುಮ್ಮನೇ ಬಂದು ತದನಂತರ ಮತ್ತಿಬ್ಬರೊಂದಿಗೆ ಸೀಟಿ ಊದುತ್ತಾ ಕಳ್ಳರ ಬಳಿ ಹೋಗಲು ಹಿಂದೇಟು ಹಾಕಿರುವುದರಿಂದ ಪೊಲೀಸ್‌ರ ಕಣ್ಣೆದುರಿಗೆ ಹಿಂಬಾಗಿಲಿಂದ ಕಳ್ಳರು ಪರಾರಿಯಾದರು ಎಂದು ನ್ಯಾಯವಾದಿ ಅನುರಾಧಾ ದೇಸಾಯಿ ತಿಳಿಸಿದ್ದಾರೆ.

ಕಂಟ್ರೋಲ್‌ ರೂಂಗೆ ಫೋನ್‌ ಮಾಡಿದ ನಂತರ ಸಕಾಲಕ್ಕೆ ಪೊಲೀಸ್‌ರು ಬಂದು ಕಾರ್ಯಾಚರಣೆ ಕೈಗೊಂಡಿದ್ದರೆ ಕಳ್ಳರು ಸಿಗುತ್ತಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next