Advertisement

ರಾಜ್ಯದಲ್ಲಿ ಬಿಜೆಪಿ ಬಹುಮತ: ಬಿಜೆಪಿ ಕಾರ್ಯಕರ್ತರ ಬೃಹತ್‌ ಸಭೆ

10:33 AM Apr 05, 2019 | keerthan |

ಕೋಟೇಶ್ವರ: ದೇಶದ ಭವಿಷ್ಯಕ್ಕಾಗಿ ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ಆಡಳಿತದ ಚುಕ್ಕಾಣಿ ಹಿಡಿಯಬೇಕಾಗಿದೆ. 5 ವರ್ಷ ಆಡಳಿತಗಳ ಅವಧಿಯಲ್ಲಿ ಸಂಸದೆಯಾಗಿ ಕೇಂದ್ರದ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸ ಲಾಗಿದೆ. ಸುಳ್ಳು ಆಶ್ವಾಸನೆ ನೀಡು ತ್ತಿರುವ ರಾಜ್ಯದ ಮೈತ್ರಿ ಸರಕಾರದ ಸಾಧನೆ ಏನು ಎಂದು ಉಡುಪಿ- ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.

Advertisement

ಕೋಟೇಶ್ವರದ ವಾದಿರಾಜ ಕಲ್ಯಾಣ ಮಂಟಪದಲ್ಲಿ ಗುರುವಾರ ಸಂಜೆ ನಡೆದ ಕೋಟೇಶ್ವರ, ಬೀಜಾಡಿ, ಕುಂದಾಪುರ ಶಕ್ತಿಕೇಂದ್ರದ ಬಿಜೆಪಿ ಕಾರ್ಯಕರ್ತರ ಬೃಹತ್‌ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕೇಂದ್ರದ ಆಯುಷ್ಮಾನ್‌ ಭಾರತ್‌ ಒಂದು ಮೈಲುಗಲ್ಲು. ಸೈನಿಕರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಒದಗಿಸಲಾಗಿದೆ. ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಮೋದಿ ಸಾಧನೆ ವಿಶ್ವವನ್ನೇ ಸೆಳೆದಿದೆ. ನೀಡಿರುವ ಮೋದಿ ಅವರ ದೂರದೃಷ್ಟಿತ್ವ ಹಾಗೂ ಸಮಾಜಮುಖೀ ಕಾರ್ಯಗಳು ದಾಖಲೆ ಎಂದರು.
ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಕಾಂಗ್ರೆಸ್‌ -ಜೆಡಿಎಸ್‌ ಮೈತ್ರಿ ಸರಕಾರದ ಹೊಣೆಗೇಡಿತನದ ಆಡಳಿತದ ಬಗ್ಗೆ ಟೀಕಿಸಿ ವ್ಯಂಗ್ಯವಾಡಿ ದರು. ಹಾಲಾಡಿ ಶ್ರೀನಿವಾಸ ಶೆಟ್ಟಿ ಕೇಂದ್ರ ಸರಕಾರದ ಸಾಧನೆಯನ್ನು ವಿಶ್ಲೇಷಿಸಿ, ಚುನಾವಣೆಯಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದರು.

ಶ್ರೀಲತಾ ಎಸ್‌. ಶೆಟ್ಟಿ, ಲಕ್ಷ್ಮೀ ಮಂಜು ಬಿಲ್ಲವ, ಕಾಡೂರು ಸುರೇಶ ಶೆಟ್ಟಿ, ರೂಪಾ ಪೈ, ವೈಲೆಟ್‌ ಬೆರೆಟ್ಟೊ, ಜಯಶ್ರೀ, ಶೈಲಶ್ರೀ, ಗೋಪಾಲ ಕಳಂಜಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next