Advertisement

Sagara ಮನೆ ಕಳ್ಳತನ ಪ್ರಕರಣ; ಪ್ರಮುಖ ಆರೋಪಿ ಬಂಧನ

08:00 PM Dec 19, 2023 | Shreeram Nayak |

ಸಾಗರ: ತಾಲೂಕಿನ ಆನಂದಪುರ, ಸಾಗರ ಪೇಟೆ, ಹೊರವಲಯದಲ್ಲಿ ಇತ್ತೀಚೆಗೆ ನಡೆದಿದ್ದ 8 ಮನೆಗಳ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಶಿವಮೊಗ್ಗದ ಟಿಪ್ಪುನಗರ 4ನೇ ಕ್ರಾಸ್ ನಿವಾಸಿ ತೌಸಿಫ್ ಅಲಿಯಾಸ್ ಭಾಯಿಜಾನ್‌ನನ್ನು ಸೋಮವಾರ ಸಾಗರ ಗ್ರಾಮಾಂತರ ಹಾಗೂ ಆನಂದಪುರ ಠಾಣಾ ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.

Advertisement

ಸಾಗರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಕರ್ಕಿಕೊಪ್ಪದ ಗಗನ್, ಗೀಜಗಾರಿನ ಶ್ರೀಮತಿ, ಶಿರವಾಳ ತೊರಗೋಡಿನ ರಾಮಚಂದ್ರ, ನಗರ ಠಾಣೆ ವ್ಯಾಪ್ತಿಯ ಬಳಸಗೋಡಿನ ರೇಣುಕಮ್ಮ, ಗೋಪಾಲಗೌಡ ನಗರದ ಧರ್ಮಶ್ರೀ ಲೇಔಟ್‌ನ ಸಂತೋಷ್, ಕಂಬಳಿಕೊಪ್ಪದ ಮಧು, ಆನಂದಪುರ ಠಾಣಾ ವ್ಯಾಪ್ತಿಯ ಬೋಳನಕಟ್ಟೆ ನಿವಾಸಿ ತೀರ್ಥರವರು ದಾಖಲಿಸಿದ್ದ ಪ್ರಕರಣಗಳ ವಿಚಾರಣೆ ನಡೆಸಿರುವ ಪೊಲೀಸರು, ಆರೋಪಿಯಿಂದ 5.70 ಲಕ್ಷ ರೂ. ಬೆಲೆಬಾಳುವ 100 ಗ್ರಾಂ ಬಂಗಾರದ ಆಭರಣ, 62,400 ಬೆಲೆಯ 1 ಕೆಜಿ ಬೆಳ್ಳಿ ಆಭರಣ ಅಮಾನತ್ತು ಪಡಿಸಿಕೊಂಡಿದ್ದಾರೆ.

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿವಮೊಗ್ಗದ ನರ್ಸರಿಯಲ್ಲಿ ಕೆಲಸ ಮಾಡುತ್ತಿರುವ ತೌಸಿಫ್‌ನ ಮತ್ತಿಬ್ಬರು ಸಹಚರರು ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಅಲ್ಲದೆ ಅವರ ಸುಳಿವು ನೀಡಿದವರಿಗೆ ಬಹುಮಾನವನ್ನೂ ಘೋಷಿಸಿದ್ದಾರೆ.

ಗ್ರಾಮಾಂತರ ಠಾಣೆ ಇನ್ಸ್‌ಸ್ಪೆಕ್ಟರ್ ಮಹಾಬಲೇಶ್ವರ ನಾಯಕ್, ಪಿಎಸ್‌ಐ ಸುಜಾತಾ, ಆನಂದಪುರ ಠಾಣೆ ಪಿಎಸ್‌ಐ ಯುವರಾಜ್, ಸಿಬ್ಬಂದಿಗಳಾದ ಸನಾವುಲ್ಲಾ, ಷೇಖ್ ಫೈರೋಜ್ ಅಹಮದ್, ರವಿ ಕುಮಾರ್‌ರವರಿದ್ದ ತಂಡವು ಪೊಲೀಸ್ ಉಪಾಧೀಕ್ಷಕ ಗೋಪಾಲಕೃಷ್ಣ ನಾಯಕ್‌ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next