Advertisement

ಇನ್ನೂ ಸಿಗದ ಯೋಧನ ಸುಳಿವು

11:13 AM May 06, 2018 | Team Udayavani |

ಶಿರಸಿ: ಚುನಾವಣಾ ಕರ್ತವ್ಯದಲ್ಲಿದ್ದ ಅರೆಸೇನಾ ಪಡೆಯ ಯೋಧನ ಪತ್ತೆಗೆ ಕರ್ನಾಟಕ ಪೊಲೀಸರು ತೀವ್ರ ಹುಡುಕಾಟ ನಡೆಸಿದರೂ ಶನಿವಾರ ರಾತ್ರಿ ತನಕ ಯೋಧನ ಕುರಿತು ಯಾವುದೇ ಸುಳಿವು ಲಭ್ಯವಾಗಿಲ್ಲ. ಈ ವಿಷಯ ದೃಢಪಡಿಸಿದ ಪೊಲೀಸ್‌ ಉಪಾಧೀಕ್ಷಕರು, ಯೋಧ ಬಳಸಿದ್ದಾನೆ ಎನ್ನಲಾದ ಬೂಟು ಹಾಗೂ ಸಾಕ್ಸ್‌ ಸಿಕ್ಕಿದ್ದು ಬಿಟ್ಟರೆ ಇನ್ನಾವುದೇ ಸುಳಿವು ಲಭ್ಯವಾಗಲಿಲ್ಲ.

Advertisement

ಬುಧವಾರ ರಾತ್ರಿ ಮೂತ್ರ ವಿಸರ್ಜನೆಗೆ ಹೋಗಿ ಬರುವುದಾಗಿ ಹೇಳಿ ಹೋದ ಯುವಕ ಕ್ಷಣಾರ್ಧದಲ್ಲಿ ನಾಪತ್ತೆಯಾದ ಕುರಿತು ಬನವಾಸಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯೋಧನ ಹುಡುಕಾಟಕ್ಕೆ ಶ್ವಾನದಳವನ್ನು ಶನಿವಾರ ಕರೆಸಿದರೂ ಪ್ರಯೋಜನವಾಗಲಿಲ್ಲವೆಂದು ತಿಳಿಸಿದ್ದಾರೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಿರಸಿ ತಾಲೂಕಿನ ದಾಸನಕೊಪ್ಪ ತಪಾಸಣಾ ಚೌಕಿಯಲ್ಲಿ ಉತ್ತರ ಪ್ರದೇಶದ 49ನೇ ಬೆಟಾಲಿಯನ್‌ ಕಾನ್‌ಸ್ಟೇಬಲ್‌ ಕೆ.ಗಣೇಶ ಕಾಣೆಯಾಗಿದ್ದಾನೆ. ಈತ ರೈಫಲ್‌ ಸಹಿತ ಸೇನಾ ಪಡೆಯ ಸಮವಸ್ತ್ರದಲ್ಲಿ ನಾಪತ್ತೆ ಆಗಿದ್ದು, ಈತ ಸ್ವಗ್ರಾಮ ತಲುಪಿದ ಕುರಿತೂ ಯಾವುದೇ ಸಂದೇಶ ಸಿಕ್ಕಿಲ್ಲ ಎನ್ನಲಾಗಿದೆ. ಅರೆಸೇನಾ ಪಡೆಯ ವಿಂಗ್‌ ಕಮಾಂಡರ್‌ ಕೂಡ ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next