Advertisement

Ullal ತೊಕ್ಕೊಟ್ಟಿನಲ್ಲಿ ನೇಪಾಲ ಮೂಲದ ಬಾಲಕಿ ಆತ್ಮಹತ್ಯೆ

11:02 PM Jun 09, 2024 | Team Udayavani |

ಉಳ್ಳಾಲ: ತೊಕ್ಕೊಟ್ಟು ಚೆಂಬುಗುಡ್ಡೆಯ ಬಾಡಿಗೆ ಮನೆಯ ಲ್ಲಿದ್ದ ನೇಪಾಲ ಮೂಲದ ಬಾಲಕಿ ಶನಿವಾರ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ರಬೀನಾ ಬಿ.ಕೆ. (16) ಮೃತಪಟ್ಟವರು.

Advertisement

ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಫಾಸ್ಟ್‌ ಫುಡ್‌ ಕಮ್‌ ಕ್ಯಾಂಟೀನ್‌ ನಡೆಸುತ್ತಿದ್ದ ನೇಪಾಲ ಮೂಲದ ರಾಮ್‌ ಶರಣ್‌ ಅವರು ಪತ್ನಿ ಮತ್ತು ನಾಲ್ವರು ಮಕ್ಕಳೊಂದಿಗೆ ತೊಕ್ಕೊಟ್ಟು, ಚೆಂಬು ಗುಡ್ಡೆಯ ರೀಟಾ ಡಿ’ಸೋಜಾ ಅವರ ಮನೆಯಲ್ಲಿ ಬಾಡಿಗೆಗೆ ನೆಲೆಸಿದ್ದರು.

ರಾಮ್‌ ಶರಣ್‌ ಅವರ ಎರಡನೇ ಮಗಳಾದ ರಬೀನ ನೇಪಾಲದಲ್ಲಿ ಎಂಟನೇ ತರಗತಿ ಓದುತ್ತಿದ್ದು, ಆಕೆ ಯನ್ನು ಮಂಗಳೂರಿನಲ್ಲೇ ಓದಿಸುವ ಸಲುವಾಗಿ ತಿಂಗಳ ಹಿಂದೆ ಪೋಷಕರು ತೊಕ್ಕೊಟ್ಟಿಗೆ ಕರೆತಂದಿದ್ದರು.ಆದರೆ ರಬೀನ ತಾನು ನೇಪಾಲದಲ್ಲೇ ಓದು ಮುಂದುವರಿಸುವುದಾಗಿ ಹೆತ್ತವರೊಂದಿಗೆ ಹಠ ಹಿಡಿದಿದ್ದಳು ಎನ್ನಲಾಗಿದೆ.

ತಾಯಿ ಮತ್ತು ಸಹೋದರಿ ಮನೆಯಿಂದ ಹೊರಗೆ ಹೋಗಿದ್ದ ಸಂದರ್ಭದಲ್ಲಿ ರಬೀನ ಮನೆಯ ಶೌಚಾ ಲಯದ ಕಬ್ಬಿಣದ ಸಲಾಕೆಗೆ ಚೂಡಿ ದಾರದ ಶಾಲಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ ಎನ್ನಲಾಗಿದೆ. ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next