Advertisement

ಮುಂದುವರಿದ ಕದನ ವಿರಾಮ ಉಲ್ಲಂಘನೆ

11:08 PM Apr 01, 2019 | mahesh |

ಜಮ್ಮು: ಕಣಿವೆ ರಾಜ್ಯದ ಪೂಂಛ… ಜಿಲ್ಲೆಯ ಸಮೀಪದ ಗಡಿ ನಿಯಂತ್ರಣ ರೇಖೆಯ ಬಳಿಯ ಭಾರತದ ಪ್ರಾಂತ್ಯಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ಥಾನ ಸೇನೆ ನಡೆಸಿದ ಶೆಲ್‌ ದಾಳಿಗೆ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಅಧಿಕಾರಿ ಹಾಗೂ ಸೋಬಿಯಾ (5) ಎಂಬ ಬಾಲಕಿಯೊಬ್ಬಳು ಬಲಿಯಾಗಿದ್ದಾರೆ.

Advertisement

ಘಟನೆಯಲ್ಲಿ 6 ಬಿಎಸ್‌ಎಫ್ ಯೋಧರು ಸಹಿತ 11 ಜನರು ಪ್ರಾಣ ತೆತ್ತಿತ್ತು, ಕೆಲವು ಮನೆಗಳಿಗೂ ಹಾನಿಯಾಗಿದೆ. ದಾಳಿಗೆ 120 ಎಂಎಂ ಗಾತ್ರದ ಮಾರಣಾಂತಿಕ ಬಾಂಬ್‌ಗಳನ್ನು ಬಳಸಲಾಗಿತ್ತು. ಕೃಷ್ಣಗಾಟಿ, ಕೇರ್ನಿ, ಮಂಕೋಟೆ, ಗುಲ್ಪುರ್‌, ದೇಗ್ವಾರ್‌ ಶಹಾಪುರ್‌ ಮತ್ತು ಪೂಂಚ್‌ ಪ್ರಾಂತ್ಯಗಳಲ್ಲಿ ದಾಳಿ ಮುಂದುವರಿದಿತ್ತು. ಸೋಮವಾರ ಬೆಳಗ್ಗೆ ಶುರುವಾದ ಮೊದಲ ಹಂತದ ದಾಳಿಯಲ್ಲಿ ಮೂವರು ನಾಗರಿಕರು ಹಾಗೂ ಒಬ್ಬ ಯೋಧ ಗಾಯಗೊಂಡಿದ್ದರು.

ಜೈಶ್‌ ಉಗ್ರನ ಬಂಧನ: ಜೈಶ್‌-ಎ- ಮೊಹಮ್ಮದ್‌ ಸಂಘಟನೆಯ ಉಗ್ರ ಫ‌ಯಾಜ್‌ ಅಹಮದ್‌ ಲೋನ್‌ ಎಂಬಾತನನ್ನು ದೆಹಲಿ ಪೊಲೀಸರ ತಂಡ ಶ್ರೀನಗರದಲ್ಲಿ ಬಂಧಿಸಿದೆ. ಕುಪ್ವಾರದ ನಿವಾಸಿ ಫ‌ಯಾಜ್‌ ಬಗ್ಗೆ ಸುಳಿವು ನೀಡಿದವರಿಗೆ 2 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಈತನ ವಿರುದ್ಧ ಹಲವು ಪ್ರಕರಣ ದಾಖಲಾಗಿದ್ದು, ಜಾಮೀನುರಹಿತ ವಾರಂಟನ್ನೂ ಹೊರಡಿಸಲಾಗಿತ್ತು. 2015ರಿಂದ ಈತ ತಲೆಮರೆಸಿ ಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಫ‌ಲ ಸ್ಫೋಟ: ಸಿಕ್ಕಿಬಿದ್ದ ಶಂಕಿತ ಉಗ್ರ
ರಾಂಬನ್‌ ಜಿಲ್ಲೆಯ ಬನಿಹಾಲ್‌ ಬಳಿಯ ಜವಾಹರ್‌ ಸುರಂಗ ಮಾರ್ಗದ ಬಳಿ ಶನಿವಾರ ಬೆಳಗ್ಗೆ ಸಿಆರ್‌ಪಿಎಫ್ ಭದ್ರತಾ ವಾಹನಗಳ ಬಳಿ ಸ್ಫೋಟವಾಗಿದ್ದ ಕಾರಿನ ಚಾಲಕ ಹಾಗೂ ಶಂಕಿತ ಉಗ್ರನನ್ನು ಬನಿಹಾಲ್‌ ನಗರದಲ್ಲೇ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಶನಿವಾರ ಬೆಳಗ್ಗೆ 10:30ರ ಸುಮಾರಿಗೆ ಸಿಆರ್‌ಪಿಎಫ್ ಸಿಬ್ಬಂದಿಯಿಂದ ಕಾವಲು ವಾಹನಗಳು ಜವಾಹಾರ್‌ ಸುರಂಗ ಮಾರ್ಗವನ್ನು ದಾಟಿ ಬಂದ ಕೆಲವೇ ಕ್ಷಣಗಳಲ್ಲಿ ಸನಿಹದಲ್ಲೇ ಸಾಗುತ್ತಿದ್ದ ಸ್ಯಾಂಟ್ರೋ ಕಾರು ಸ್ಫೋಟಗೊಂಡಿತ್ತು. ಇದರಲ್ಲಿದ್ದ ಎರಡು ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ಒಂದು ಸ್ಫೋಟಗೊಂಡಿತ್ತು. ಘಟನೆಯ ನಂತರ, ಚಾಲಕ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದ. ಜತೆಗೆ, ಕಾರಿನಲ್ಲಿ ಮತ್ತೂಂದು ಸಿಲಿಂಡರ್‌, ಪೆಟ್ರೋಲ್‌ ತುಂಬಿದ ಕ್ಯಾನು, ಜಿಲೆಟಿನ್‌ ಕಡ್ಡಿಗಳು, ಇತರ ಸ್ಫೋಟಕ ಸಾಮಗ್ರಿಗಳು ಹಾಗೂ ಜೈಷ್‌ ಎ ಮೊಹಮ್ಮದ್‌ ಸಂಘಟನೆಯ ಪತ್ರವೊಂದು ಸಿಕ್ಕಿದ್ದು ಅದರಿಂದ ಆತ ಆ ಸಂಘಟನೆಯ ವ್ಯಕ್ತಿಯೆಂಬುದು ದೃಢವಾಗಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next