Advertisement

Dandeli: ಪಿಠೋಪಕರಣಗಳ‌ ಅಂಗಡಿಯಲ್ಲಿ ಅಗ್ನಿ ಅವಘಡ; ಅಪಾರ ಹಾನಿ

02:42 PM Feb 24, 2024 | Team Udayavani |

ದಾಂಡೇಲಿ: ನಗರದ ಮಾರುತಿ ನಗರದ ಪಿಠೋಪಕರಣಗಳ ಅಂಗಡಿಯಲ್ಲಿ ಅಗ್ನಿ ಅವಘಡ ಸಂಭವಿಸಿ, ಅಪಾರ ಹಾನಿಯಾದ ಘಟನೆ ಫೆ.24ರ ಶನಿವಾರ ನಸುಕಿನ ವೇಳೆ ನಡೆದಿದೆ.

Advertisement

ಮಾರುತಿ‌ ನಗರದಲ್ಲಿರುವ ಅಬ್ದುಲ್ ಖುದ್ದುಸ್ ಸೈಯದ್ ಆದಂ ಮಾಲಕತ್ವದ ಕಟ್ಟಡದಲ್ಲಿರುವ ಸಚಿನ್ ಸಿದ್ದರಾಯ್ ಮುಚ್ಚಂಡಿಕರ್ ಎಂಬವರ ಕಟ್ಟಿಗೆ ಪಿಠೋಪಕರಣಗಳ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಗೆ ಅಂಗಡಿಯೊಳಗಿದ್ದ ಮರದ ಪಿಠೋಪಕರಣಗಳು‌ ಸಂಪೂರ್ಣ ಸುಟ್ಟು ಕರಲಾಗಿದೆ.‌ ಪಿಠೋಪಕರಣಗಳನ್ನು ಸಿದ್ದಪಡಿಸುವ ಯಂತ್ರಗಳು‌ ಕೂಡ ಸುಟ್ಟು ಹೋಗಿದ್ದು, ಅಪಾರ ಪ್ರಮಾಣದಲ್ಲಿ‌ ನಷ್ಟ ಸಂಭವಿಸಿದೆ.

ಘಟನೆ ನಡೆದ ಸ್ವಲ್ಪ ಹೊತ್ತಿನಲ್ಲೇ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳದ ವಾಹನ ಸ್ಥಳಕ್ಕೆ ದೌಡಾಯಿಸಿ ಬೆಂಕಿ‌‌ ನಂದಿಸಿದೆ.

ಘಟನಾ ಸ್ಥಳಕ್ಕೆ ಪಿಎಸ್ಐ ಐ.ಆರ್.ಗಡ್ಡೇಕರ್, ಎಎಸ್ಐ ವೆಂಕಟೇಶ್, ಪೊಲೀಸ್‌ ಸಿಬ್ಬಂದಿಗಳಾದ ಮಹಾದೇವ, ಎಸ್.ಬಳೆಗಾರ, ಶಂಕರ ಗುದ್ದನ್ನವರ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next