Advertisement

ಎ ಫಿಲ್ಮ್ ಬೈ ಮಿಥುನ್‌ ಚಿತ್ರದಲ್ಲಿ ಭಯ ಹುಟ್ಟಿಸೋ ಕಥೆ

11:51 AM May 08, 2020 | Suhan S |

ಕನ್ನಡದಲ್ಲಿ ಈಗಾಗಲೇ ತರಹೇವಾರಿ ಶೀರ್ಷಿಕೆ ಇರುವ ಸಿನಿಮಾಗಳು ಬಂದಿವೆ. ಬರುತ್ತಲೇ ಇವೆ. ಆ ಸಾಲಿಗೆ ಈಗ “ಎ ಫಿಲ್ಮ್ ಬೈ ಮಿಥುನ್‌’ ಎಂಬ ಸಿನಿಮಾ ಕೂಡ ಸೇರಿದೆ.

Advertisement

ಹೌದು, ಬಹುತೇಕ ಹೊಸಬರೇ ಸೇರಿ ಮಾಡಿದ ಸಿನಿಮಾವಿದು. ಈ ಚಿತ್ರವನ್ನು ಮಿಥುನ್‌ ಎಂಬ ಹೊಸ ಪ್ರತಿಭೆ ಕಥೆ, ಚಿತ್ರಕಥೆ ರಚಿಸಿ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಇನ್ನು, ಪ್ರವೀಣ್‌ ಅವರು ಈ ಸಿನಿಮಾದ ಹೀರೋ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶ್ರೀ ದೃಷ್ಠಿ ಪ್ರೊಡಕ್ಷನ್ಸ್‌ ಮೂಲಕ ಪ್ರವೀಣ್‌, ಲಯನ್‌ ವಿಜಯಕುಮಾರ್‌ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. ಇವರಿಗೆ ಸಹ ನಿರ್ಮಾಣದಲ್ಲಿ ಪುರುಷೋತ್ತಮ್‌ ಮತ್ತು ನವೀನ್‌ ಸಾಥ್‌ ನೀಡಿದ್ದಾರೆ.

ಇದೊಂದು ಹಾರರ್‌ಗೆ ಸಂಬಂಧಿಸಿದ ಚಿತ್ರ. ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಹಾರರ್‌ ಚಿತ್ರಗಳು ಬಂದಿವೆಯಾದರೂ, ಇದರಲ್ಲಿ ಒಂದಷ್ಟು ಹೊಸ ವಿಷಯಗಳಿವೆ ಎಂಬುದು ಚಿತ್ರತಂಡದ ಹೇಳಿಕೆ. ಆಂದಹಾಗೆ, ಇಲ್ಲಿ ಹೀರೋ ಚಿತ್ರದಲ್ಲಿ ಅಡ್ವೆಂಚರ್‌ ಕಥೆ ಮಾಡಿ ಸಿನಿಮಾ ನಿರ್ದೇಶಿಸಲು ಒಂದು ಬಂಗಲೆಗೆ ಬರುತ್ತಾನೆ. ಒಬ್ಬ ಮಾಂತ್ರಿಕನ ಸಹಾಯದಿಂದ ಆತ್ಮವೊಂದನ್ನು ಆ ಜಾಗಕ್ಕೆ ಕರೆಸಿಕೊಳ್ಳುತ್ತಾನೆ. ಆದರೆ, ಆ ಆತ್ಮ ಅಲ್ಲಿಗೆ ಬಂದ ಬಳಿಕ ಅಲ್ಲಿದ್ದವರಿಗೆಲ್ಲ ತೊಂದರೆ ಕೊಡುತ್ತದೆ, ಭಯ ಹುಟ್ಟಿಸುತ್ತದೆ. ಆದರೆ, ಆ ಹೀರೋಗೆ ಮಾತ್ರ ಯಾವುದೇ ತೊಂದರೆ ಕೊಡಲ್ಲ. ಅವನಿಗೆ ಸಹಕಾರಿಯಾಗಿಯೇ ನಿಲ್ಲುತ್ತೆ. ಆ ಆತ್ಮ ಹೀರೋ ಜೊತೆ ಒಂದಷ್ಟು ವಿಷಯ ಹಂಚಿಕೊಳ್ಳುತ್ತದೆ. ಆ ಆತ್ಮಕ್ಕೊಂದು ನೋವು ಆಗಿದೆ ಅನ್ನೋದು ಹೀರೋಗೆ ಗೊತ್ತಾಗುತ್ತೆ. ಆದಂತಹ ಅನ್ಯಾಯ ವಿರುದ್ಧ ಹೀರೋ ಫೈಟ್‌ ಮಾಡೋಕೆ ನಿಲ್ಲುತ್ತಾನೆ ಆಮೇಲೆ ಏನೆಲ್ಲಾ ಆಗುತ್ತೆ ಎಂಬುದು ಕಥೆ ಎಂಬುದು ಚಿತ್ರತಂಡದ ಹೇಳಿಕೆ.

ಬಹುತೇಕ ಬೆಂಗಳೂರು, ನೆಲಮಂಗಲ ಸಮೀಪದ ಗೆಸ್ಟ್‌ ಹೌಸ್‌ ಇತರೆಡೆ ಚಿತ್ರೀಕರಣಗೊಂಡಿದೆ. ಈಗಾಗಲೇ ಸಿನಿಮಾ ಮುಗಿದಿದ್ದು, ಲಾಕ್‌ಡೌನ್‌ ತೆರವಿನ ಬಳಿಕ ಒಂದ ದಿನದ ಪ್ಯಾಚ್‌ ವರ್ಕ್‌ ಮುಗಿದರೆ ಸಿನಿಮಾಗೆ ಕುಂಬಳಕಾಯಿ. ಚಿತ್ರದಲ್ಲಿ ಮಾನಸ ಶೆಟ್ಟಿ ನಾಯಕಿಯಾಗಿದ್ದಾರೆ. ನಿರಂಜನ್‌ ಕುಮಾರ್‌, ಸೀತಾರಾಮ್‌ ಕಣ್ಣ , ಮಿಲ್‌ ಚಂದ್ರು, ಸಾಧು ಮುಗುರುಗೇಶ್‌ ಸೇರಿದಂತೆ ಇತರರು ನಟಿಸಿದ್ದಾರೆ. ಚಿತ್ರಕ್ಕೆ ರವಿ ಸುವರ್ಣ ಛಾಯಾಗ್ರಹಣವಿದೆ. ಚೆಲುವ ಮೂರ್ತಿ ಸಂಕಲನ ಮಾಡಿದರೆ, ಚಂದ್ರು ಓಬಯ್ಯ ಸಂಗೀತವಿದೆ.­

Advertisement

Udayavani is now on Telegram. Click here to join our channel and stay updated with the latest news.

Next