Advertisement
ಸುದ್ದಿ ತಿಳಿದು ಉರಗ ಪ್ರೇಮಿ ಬಾಬು ಸಾಲ್ಯಾನ್ ಕೊಳ ಮತ್ತು ಉರಗ ತಜ್ಞ ಗುರುರಾಜ್ ಸನಿಲ್ ಅವರು ಆಗಮಿಸಿದ್ದು ಸುರಕ್ಷಿತ ಸ್ಥಳಕ್ಕೆ ಮೊಟ್ಟೆ, ಹಾವುಗಳನ್ನು ಕೊಂಡೊಯ್ದಿದ್ದಾರೆ. ಪತ್ತೆಯಾಗಿದ್ದು ಹೇಗೆ?
ಕಟ್ಟಿಗೆ ರಾಶಿ ಪಕ್ಕದ ಒಂದು ಮೂಲೆಯಲ್ಲಿ ಮಣ್ಣಿನ ಗುಹೆಯಾಕಾರದ ಸಂರಚನೆಯಲ್ಲಿ ನಾಗರಹಾವು ಒಂದು ವಾರದಿಂದ ತಲೆ ಹೊರಗೆ ಹಾಕುತ್ತಿರುವುದನ್ನು ಸಮೀಪದ ಮನೆಯವರು ನೋಡಿದ್ದಾರೆ. ಈ ಬಗ್ಗೆ ಸೋಮವಾರ ಮಲ್ಪೆಯ ಬಾಬು ಸಾಲ್ಯಾನ್ ಅವರ ಗಮನಕ್ಕೆ ಬಂದಿದ್ದು, ಬಳಿಕ ಹಾವಿದ್ದುದನ್ನು ನೋಡಿ ಗುರುರಾಜ್ ಅವರನ್ನು ಕರೆಸಿದ್ದಾರೆ. ಅವರು ಮೊದಲು ಹಾವನ್ನು ಹಿಡಿದು ಬಳಿಕ ಮೊಟ್ಟೆಯನ್ನು ಸುರಕ್ಷಿತವಾಗಿ ಹೊರತೆಗೆದು ಮನೆಗೆ ಕೊಂಡೊಯ್ದಿದ್ದಾರೆ. ಮೊಟ್ಟೆಗಳನ್ನು ತಾಪದ ಜಾಗದಲ್ಲಿ ಇಟ್ಟು ಕಾವು ನೀಡಿ ಮರಿಗಳು ಹೊರ ಬಂದ ಬಳಿಕ ಸುರಕ್ಷಿತವಾಗಿ ಕಾಡಿಗೆ ಬಿಡಲಾಗುವುದು ಎಂದು ತಿಳಿಸಿದ್ದಾರೆ.