ಸಚಿವರ ಬಳಿ ಬಂದ ರೈತನೊಬ್ಬ, “ನಮ್ಮ ಕಡೆಗೆ ಬರದ ಸಮಸ್ಯೆ ಆಗೇತಿ ಸಾಹೇಬ್ರ. ದನಗಳಿಗೆ ಕುಡಿಯಲು ನೀರು, ಮೇವಿಲ್ಲದ್ದರಿಂದ ಮಾರುವ ಸ್ಥಿತಿ ಐತಿ. ಸರಕಾರದಿಂದ ಬರಬೇಕಾಗಿದ್ದ ವಿಮಾ ಪರಿಹಾರ ಇನ್ನೂ ಬಂದಿಲ್ಲ. ಎಷ್ಟು ಬಾರಿ ವಿನಂತಿ
ಮಾಡಿಕೊಂಡರೂ ಇನ್ನೂವರೆಗೆ ಪರಿಹಾರ ಸಿಕ್ಕಿಲ್ಲ. ನೀವಾದ್ರೂ ಪರಿಹಾರ ಕೊಡಸ್ರಿ’ ಎಂದು ಸಚಿವ ಆರ್.ವಿ.ದೇಶಪಾಂಡೆ ಅವರಿಗೆ ಮನವಿ ಮಾಡಿದ್ದಾನೆ.
Advertisement
ಬರಗಾಲದಿಂದ ನೇಸರಗಿ ಭಾಗದ ಜನತೆ ತತ್ತರಿಸಿದ್ದೇವೆ. ಈ ಭಾಗದಲ್ಲಿ ನೀರಾವರಿ ಮಾಡಿ ಶಾಶ್ವತ ಪರಿಹಾರ ದೊರಕಿಸಿ ಕೊಡಿ ಎಂದು ರೈತ ಸಚಿವರಲ್ಲಿ ಮನವಿ ಮಾಡಿಕೊಂಡರು. ರೈತರನ್ನು ಸಮಾಧಾನ ಪಡಿಸಿದ ಸಚಿವ ದೇಶಪಾಂಡೆ, ಬೆಳೆ ವಿಮಾ ಯೋಜನೆಯಡಿ ಹಣ ತುಂಬಿದ ಜನಕ್ಕೆ ಅನ್ಯಾಯವಾಗಬಾರದು. ಶೀಘ್ರವೇ ಪರಿಹಾರ ಹಣವನ್ನು ಜಿಲ್ಲಾಡಳಿತದ ಮೂಲಕ ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಭರವಸೆ ನೀಡಿದರು.