Advertisement

Mudhol: ನದಿಯಲ್ಲಿದ್ದ ಮೋಟಾರ್‌ ತೆಗೆಯುವಾಗ ವಿದ್ಯುತ್‌ ತಗುಲಿ ರೈತ ಮೃತ್ಯು

06:24 PM Oct 20, 2024 | Team Udayavani |

ಮುಧೋಳ: ಘಟಪ್ರಭಾ ನದಿ ನೀರು ಹೆಚ್ಚಳಗೊಂಡ ಪರಿಣಾಮ ನದಿಯಲ್ಲಿದ್ದ ಮೋಟಾರ್‌ ತೆಗೆಯಲು ತೆರಳಿದ್ದ ರೈತರೊಬ್ಬರು ವಿದ್ಯುತ್‌ ತಗುಲಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಜುಂಝುರಕೊಪ್ಪ ಗಲ್ಲಿಯಲ್ಲಿ ಶನಿವಾರ ಸಂಭವಿಸಿದೆ.

Advertisement

ಮೃತನನ್ನು ರೂಗಿ ಗ್ರಾಮದ ನಿವಾಸಿ ವೆಂಕಟೇಶ ತಿಪ್ಪಣ್ಣ ಬೆಳಗಲಿ(36) ಎಂದು ಗುರುತಿಸಲಾಗಿದೆ.

ಮೋಟಾರ್‌ ವೈರ್‌ ಸುತ್ತುವ ವೇಳೆ ಈ ಘಟನೆ ಸಂಭವಿಸಿದೆ. ಬೆಳಿಗ್ಗೆ ಮನೆಯಿಂದ ಹೋಗಿದ್ದ ರೈತ ಮರಳದ ಕಾರಣ ಜಮೀನಿಗೆ ಹೋಗಿ ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಮುಧೋಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next