Advertisement

ತಲೆಗೆ ಸುತ್ತಿಗೆಯಿಂದ ಹೊಡೆದು ಭದ್ರತಾ ಸಿಬ್ಬಂದಿಯ ಹತ್ಯೆ; ಎಟಿಎಂ ಕಳ್ಳತನಕ್ಕೆ ವಿಫಲ ಪ್ರಯತ್ನ

03:24 PM Aug 25, 2020 | keerthan |

ವಿಜಯಪುರ‌: ಬ್ಯಾಂಕ್ ಎಟಿಎಂ ಭದ್ರತಾ ಸಿಬ್ಬಂದಿಯನ್ಬು ಭೀಕರ ಹತ್ಯೆ ಮಾಡಿ ಎಟಿಎಂ ದರೋಡೆಗೆ ಯತ್ನಿಸಿದ ಕಳ್ಳರು, ಸೈರನ್ ಮೊಳಗಿದ್ದರಿಂದ ಪರಾರಿ ಅಗಿರುವ ಘಟನೆ ಸಿಂದಗಿ ಪಟ್ಟಣದಲ್ಲಿ ಜರುಗಿದೆ.

Advertisement

ಹತ್ಯೆಯಾದ ದುರ್ದೈವಿ ಭದ್ರತಾ ಸಿಬ್ಬಂದಿಯನ್ನು ರಾಹುಲ್ ರಾಠೋಡ್ (22) ಎಂದು ಗುರುತಿಸಲಾಗಿದೆ.

ಮುಸುಕು ಹಾಕಿಕೊಂಡು ಬಂದಿದ್ದ ಮೂವರು ಕಳ್ಳರು ಸಿಂದಗಿ ಪಟ್ಟಣದ ಶಹಾಪುರ ಕಾಂಪ್ಲೆಕ್ಸ್ ನಲ್ಲಿರುವ ಎಟಿಎಂ ಕಳ್ಳತನಕ್ಕೆ ಬಂದಿದ್ದಾರೆ. ಈ ಹಂತದಲ್ಲಿ ಕಾವಲುಗಾರ ರಾಹುಲ್ ಎಟಿಎಂ ಕ್ಯಾಬಿನ್ ನಲ್ಲಿ ಮಲಗಿದ್ದ. ಹೀಗಾಗಿ ಮೊದಲು ರಾಹುಲನ ತಲೆಗೆ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾರೆ.

ಬಳಿಕ ಎಟಿಎಂ ಮಷೀನ್ ಹಣ ದೋಚಲು ಮುಂದಾಗಿದ್ದು, ಸೈರನ್ ಮೊಳಗುತ್ತಲೇ ಪರಾರಿಯಾಗಿದ್ದಾರೆ.

Advertisement

ಆದರೆ ಘಟನೆ ಬಳಿಕ ಎಟಿಎಂ ನಲ್ಲಿದ್ದ ಹಣದ ಮಾಹಿತಿ ನೀಡಲು ಐಸಿಐಸಿಐ ಬ್ಯಾಂಕ್ ಅಧಿಕಾರಿಗಳು ನಿರಾಕರಿದ್ದಾರೆ.

ಸಿಂದಗಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳದಿಂದ ಪರೀಕ್ಷೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next