Advertisement

ದಾಖಲೆ ಸಹಿತ ಪ್ರತಿಪಾದನೆ

01:16 AM Jan 12, 2020 | Lakshmi GovindaRaj |

ಬೆಂಗಳೂರು: “ಬಸವಣ್ಣ ಶೈವನಾಗಿದ್ದವನು ವೀರಶೈವನಾದ. ಆದರೆ, ಅವನ ಮಲ ಸೋದರ ದೇವರಾಜನೂ ವೀರಶೈವನಾಗಿರಲಾರ. ಅವನು ಬ್ರಾಹ್ಮಣನಾಗಿದ್ದೂ ವೀರಶೈವಾ ಭಿಮಾನಿ ಆಗಿರಬೇಕು. ಆ ದೇವರಾಜನ ವಂಶಸ್ಥರು ಈಗಲೂ ಇದ್ದಾರೆ. ಖುದ್ದು ನಾನು ಅಲ್ಲಿಗೆ ಹೋಗಿ, ಮಾತನಾಡಿ ಖಚಿತಪಡಿಸಿಕೊಂಡಿದ್ದೇನೆ…’

Advertisement

-ಹೀಗಂತ ಹಿರಿಯ ಸಂಶೋಧಕ ಡಾ.ಚಿದಾನಂದಮೂರ್ತಿ ತಮ್ಮ “ಹೊಸ ಬೆಳಕಿನಲ್ಲಿ ಬಸವಣ್ಣ’ ಕೃತಿಯಲ್ಲಿ ಬರೆದುಕೊಂಡಿದ್ದಾರೆ. ಇದು ಅವರ ಕ್ಷೇತ್ರಾಧ್ಯಯನ ಅದರಲ್ಲೂ ವೀರಶೈವ-ಲಿಂಗಾಯತ ವಿಚಾರಕ್ಕೆ ಸಂಬಂಧಿ ಸಿದ ಸಂಶೋಧನೆ ಎಷ್ಟರಮಟ್ಟಿಗೆ ಆಳವಾಗಿತ್ತು ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ.

ಗುರುಪೀಠಗಳು ಇರುವುದು ಧಾರ್ಮಿಕ ವ್ಯವಸ್ಥೆಗೆ ಹಾಗೂ ವಿರಕ್ತ ಪೀಠಗಳು ಇರುವುದು ಜ್ಞಾನ ವ್ಯವಸ್ಥೆಗೆ. ರೂಪ ಬೇರೆ ಯಾಗಿದ್ದರೂ ಸ್ವರೂಪ ಒಂದೇ. ವಿರಕ್ತಪೀಠಗಳು ವಚನವಾಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟರೂ ಸಿದ್ಧಾಂತ ಶಿಖಾಮಣಿಗೆ ಸಂಸ್ಕೃತಕ್ಕೆ ಕಡಿಮೆ ಸ್ಥಾನ ನೀಡಿಲ್ಲ. ಹಾಗಾಗಿ, ವೀರಶೈವ-ಲಿಂಗಾಯತ ಎರಡೂ ಸಮಾನ ಎಂಬುದು ಚಿದಾನಂದ ಮೂರ್ತಿ ಅವರ ಗಟ್ಟಿ ನಿಲುವು ಆಗಿತ್ತು.

ವೀರಶೈವ-ಲಿಂಗಾಯತ ಕುರಿತ ಸಂಶೋ ಧನಾ ಫ‌ಲಿತಗಳನ್ನು ನೀಡುವುದರಲ್ಲಿ ಚಿದಾ ನಂದಮೂರ್ತಿ (ಚಿಮೂ) ಅವರ ನಿಲುವು ಒಪ್ಪಿತ ಆಗಿರಬಹುದು ಅಥವಾ ಆಗಿಲ್ಲ ದಿರಬ ಹುದು. ಆದರೆ, ಅವರು ಒದಗಿಸುವ ಸಾಕ್ಷ್ಯಾ ಧಾರ ,ವ್ಯಾಪಕ ಕ್ಷೇತ್ರಾಧ್ಯಯ ನವನ್ನು ಪ್ರತಿಯೊ ಬ್ಬರೂ ಗೌರವಿಸುವಂತ ಹದ್ದಾಗಿತ್ತು. ಈ ನಿಟ್ಟಿನಲ್ಲಿ ಹೇಳುವುದಾದರೆ ಫ‌.ಗು.ಹಳಕಟ್ಟಿ, ಭೂಸನೂರ ಮಠ ಅವರ ಪರಂಪರೆ ಮುಂದುವರಿಸಿದವರು ಚಿಮೂ ಎಂದು ವಿಶ್ಲೇಷಿಸಲಾಗುತ್ತದೆ.

ಹಿಂದಿನ ಸರ್ಕಾರ ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮುಂದಾದಾಗಲೂ ತಮ್ಮ ಇಳಿ ವಯಸ್ಸಿನಲ್ಲಿಯೂ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದರು. ವೀರಶೈವ-ಲಿಂಗಾಯತ ಎರಡೂ ಒಂದೇ. ಅವುಗಳನ್ನು ಪ್ರತ್ಯೇಕ ಗೊಳಿಸು ವುದು ಮೂರ್ಖತನದ ನಿರ್ಧಾರ ಎಂದು ಟೀಕಿಸಿದ್ದರು. ಅವರ ಇಂತಹ ಖಂಡ ತುಂಡಾದ ನಿಲುವುಗಳಿಂದ ತಮ್ಮ ಕೆಲವು ಶಿಷ್ಯವೃಂದ ಅಂತರ ಕಾಯ್ದುಕೊಂಡಿದ್ದೂ ಉಂಟು. ಹಾಗಂತ, ಚಿಮೂ ಅವರ ನಿಲುವು ಮಾತ್ರ ಅಚಲವಾಗಿತ್ತು.

Advertisement

“ಚಿದಾನಂದಮೂರ್ತಿ (ಚಿಮೂ) ನಾಡಿನ ಸಂಶೋಧಕರ ಸಾಲಿನಲ್ಲಿ ಅಗ್ರಮಾನ್ಯರ ಸಾಲಿ ನಲ್ಲಿ ನಿಲ್ಲುವ ಸಂಶೋಧಕ. ನಾನು ಅವರ ಪ್ರಿಯ ಶಿಷ್ಯ ಕೂಡ. ಹಾಗೂ ಅವರು ನಡೆಸಿದ ಸಂಶೋಧನೆ ಬಗೆಗೆ ನನಗೆ ದೊಡ್ಡ ಗೌರವ ಇದೆ,’ ಎಂದು ಚಿಮೂ ಅವರ ಶಿಷ್ಯ, ಚಿಂತಕ ಪ್ರೊ.ಎಸ್‌.ಜಿ.ಸಿದ್ದರಾಮಯ್ಯ ತಿಳಿಸುತ್ತಾರೆ.

ಒಂದೇ ಅಲ್ಲ; ಬೇರೆಯಾಗದಂತೆ ಬೆರೆತಿವೆ!: “ವೀರಶೈವ ಮತ್ತು ಲಿಂಗಾಯತ ಇವೆರಡೂ ಬೇರೆ ಮಾಡಲಾಗದಷ್ಟು ಒಂದರಲ್ಲಿ ಮತ್ತೂಂದು ಬೆರೆತುಹೋಗಿದೆ ಎನ್ನುವುದು ವಾಸ್ತವವಾಗಿರಬಹುದು. ಆದರೆ, ಅವರೆಡೂ ಒಂದೇ ಎಂಬ ಚಿದಾನಂದಮೂರ್ತಿ ಅವರ ವಾದ ವನ್ನು ನಾನು ಒಪ್ಪುವುದಿಲ್ಲ. ಏಕೆಂದರೆ, ಲಿಂಗಾ ಯತ ನಿಜವಾಗಿಯೂ ವೀರಶೈವದ ಒಳಗೂ ಇದ್ದ ವೈದಿಕತೆಯಿಂದ ಬಿಡಿಸಲು ಪ್ರಯತ್ನಿಸಿದ ಒಂದು ಪ್ರಯತ್ನ.

ಅದು ಜನಪರ ಮತ್ತು ಶ್ರಮ ಸಂಸ್ಕೃತಿ ಎತ್ತಿಹಿಡಿಯುವ ಚಳವಳಿ. ವೀರಶೈವ ಎಲ್ಲಾ ವೈದಿಕ ಆಚರಣೆ ಒಳಗೊಂಡಿದ್ದಾಗಿತ್ತು. ಇದನ್ನು ಸ್ವತಃ ಚಿಮೂ 80ರ ದಶಕದ ಕಾಲಘಟ್ಟದಲ್ಲಿ ಲಿಂಗಾ ಯತದಲ್ಲಿನ ಪ್ರಗತಿಪರ ಮತ್ತು ಜನಪರ ನಿಲುವುಗಳನ್ನು ಒಪ್ಪಿಕೊಂಡವರಾಗಿದ್ದರು. ಆದರೆ, ನಂತರದಲ್ಲಿ ಮೂಲಭೂತವಾದದತ್ತ ಚಲಿಸಿದರು ಎಂದು ನನಗೆ ಅನಿಸುತ್ತದೆ ಎಂದು ಮತ್ತೋರ್ವ ಶಿಷ್ಯೆ ಪ್ರೊ.ಎಂ.ಎಸ್‌.ಆಶಾದೇವಿ ಸ್ಪಷ್ಟಪಡಿಸುತ್ತಾರೆ.

ಧರ್ಮಬೇಧ ಬೇಡ: ವೀರಶೈವ-ಲಿಂಗಾಯತ ವಿಚಾರ ಮಾತ್ರವಲ್ಲ; ದೇವರ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಇವರಿಬ್ಬರೂ ಒಂದೇ ಎಂದು ಒಂದು ವರ್ಗ ವಾದಿಸುತ್ತಿರುವಾಗ, ಆ ಬಗ್ಗೆ ದಾಖಲೆಗಳ ಸಹಿತ ಅವರಿಬ್ಬರೂ ಬೇರೆ ಬೇರೆ ಹಾಗೂ ವಚನ ಸಾಹಿತ್ಯದ ಆರಂಭಕಾರ ಜೇಡರ ದಾಸಿಮಯ್ಯ ಎಂದೂ ಚಿಮೂ ಪ್ರತಿಪಾದಿಸಿದ್ದರು.

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next