Advertisement

ನವಜಾತ ಶಿಶು ಜೀವ ಉಳಿಸಿದ ವೈದ್ಯರು

03:13 AM Apr 12, 2020 | Hari Prasad |

ಮುಂಬಯಿ: ಆಗಷ್ಟೇ ಜನಿಸಿದ ಮಗುವೊಂದಕ್ಕೆ ಉಸಿರಾಟದ ಸಮಸ್ಯೆ ಎದುರಾದ ಹಿನ್ನೆಲೆಯಲ್ಲಿ, ಲಾಕ್‌ ಡೌನ್‌ ನಡುವೆಯೂ ಕೆಲವೇ ನಿಮಿಷಗಳಲ್ಲಿ ವೈದ್ಯರು ಬೈಕ್‌ನಲ್ಲಿ ಕರೆದೊಯ್ದು ನವಜಾತ ಶಿಶುವಿನ ಜೀವ ಉಳಿಸಿದ್ದಾರೆ.

Advertisement

ಮುಂಬಯಿನ ಅಲಿಬಾಗ್‌ ನಿವಾಸಿ ಶ್ವೇತಾ ಪಾಟೀಲ್‌ರನ್ನು ಪತಿ ಕೇತನ್‌ ಶುಕ್ರವಾರ ನವಜಾತ ಶಿಶುವಿಹಾರಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಮಗುವಿಗೆ ಉಸಿರಾಟದ ಸಮಸ್ಯೆ ಎದುರಾದ ಕಾರಣ, ಕೂಡಲೇ ಬೈಕ್‌ನಲ್ಲಿ ಮಹರಾಷ್ಟ್ರದ ಅಲಿಬಾಗ್‌ನ ವೈದ್ಯರು ಕರೆದುಕೊಂಡು ಹೋಗಿ ಆ ಶಿಶುವಿನ ಜೀವ ಉಳಿಸಿದ್ದಾರೆ.

ನವಜಾತ ಮಗುವಿಗೆ ಆರೈಕೆ ಅಗತ್ಯವಾಗಿದ್ದರಿಂದ ಸುಮಾರು 1.5 ಕಿ.ಮೀ ದೂರವಿರುವ ಡಾ.ಚಂದ್ರೋರ್ಕರ್‌ ಅವರ ಆಸ್ಪತ್ರೆಗೆ ವೈದ್ಯರ ಬೈಕ್‌ನಲ್ಲೇ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next