Advertisement

Mother: ಮಾನಸಿಕ ಅಸ್ವಸ್ಥ ವೃದ್ಧ ತಾಯಿಯನ್ನು ನಡುರಸ್ತೆಯಲ್ಲೇ ಬಿಟ್ಟು ಹೋದ ಪುತ್ರಿ!

01:43 PM Jan 07, 2024 | Team Udayavani |

ಚಂದಾಪುರ: ನಡುರಾತ್ರಿ ಕೊರೆಯುವ ಚಳಿಯಲ್ಲೇ ಕಾರಿನಲ್ಲಿ ಕರೆತಂದು ವೃದ್ಧ ತಾಯಿಯನ್ನು ನಡುರಸ್ತೆಯಲ್ಲೇ ಮಗಳು ಬಿಟ್ಟು ಹೋಗಿರುವ ಅಮಾನವೀಯ ಘಟನೆ ಸರ್ಜಾಪುರ ಸಮೀಪದ ವಿ. ಕಲ್ಲಹಳ್ಳಿಯಲ್ಲಿ ನಡೆದಿದೆ.

Advertisement

ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಗುರುತು ಹಿಡಿಯಲು ಕಷ್ಟವಾಗುತ್ತಿದೆ. ಮುಂಜಾನೆ ಗ್ರಾಮದ ದೇವಾಲಯಕ್ಕೆ ಹೋಗುತ್ತಿದ್ದ ಸಾರ್ವಜನಿಕರು, ಚಳಿಯಲ್ಲಿ ನಡುಗುತ್ತಿದ್ದ ವೃದ್ಧೆಯನ್ನು ಕಂಡು ಆಟೋದಲ್ಲಿ ಸರ್ಜಾಪುರ ಪೊಲೀಸ್‌ ಠಾಣೆಗೆ ಕರೆತಂದಿದ್ದಾರೆ. ಆಕೆಯನ್ನು ದೊಮ್ಮಸಂದ್ರದ ನಿವಾಸಿ ಗ್ರೇಸಿ ಪೀಟರ್‌ ಎನ್ನಲಾಗುತ್ತಿದೆ. ಆದರೆ, ವೃದ್ಧೆ ತೀವ್ರ ಅಸ್ವಸ್ಥಳಾಗಿದ್ದು, ನಿಖರ ಮಾಹಿತಿ ನೀಡುತ್ತಿಲ್ಲ. ವೃದ್ಧೆ ಒಮ್ಮೆ ಬೊಮ್ಮಸಂದ್ರ ಎಂದು ಹೇಳುತ್ತಾರೆ. ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದು, ಪೊಲೀಸರಿಗೆ ಅರ್ಥವಾಗುತ್ತಿಲ್ಲ. ವೃದ್ಧೆಗೆ ಆರೋಗ್ಯದ ಸಮಸ್ಯೆ ಇರುವ ಕಾರಣ ಬನ್ನೇರುಘಟ್ಟ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಸೇರಿಸಲಾಗಿದೆ.

ಈಕೆಯ ಮಗಳು ಮತ್ತು ಅಳಿಯನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಸರ್ಜಾಪುರ ವೃತ್ತ ನಿರಿಕ್ಷಕ ನವೀನ್‌ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next