Advertisement

ಮಂಜೇಶ್ವರದ ಸಮಗ್ರ ಇತಿಹಾಸ ದಾಖಲೀಕರಣ

08:19 PM Feb 13, 2020 | Sriram |

ಕಾಸರಗೋಡು: ದ್ರಾವಿಡ ಸಂಸ್ಕಾರಗಳ ಸಂಗಮಭೂಮಿ ಮಂಜೇಶ್ವರದ ಸಮಗ್ರ ಇತಿಹಾಸವನ್ನು ದಾಖಲಿಸುವ ಯೋಜನೆ ಸಿದ್ಧವಾಗುತ್ತಿದೆ.

Advertisement

ಮಂಜೇಶ್ವರ ಬ್ಲಾಕ್‌ ಪಂಚಾಯತ್‌ ಆಶ್ರಯದಲ್ಲಿ ವಿವಿಧ ವಲಯಗಳ ಪರಿಣತರಾಗಿರುವ ನೂರಾರು ಸಂಶೋಧಕರು ನಡೆಸುವ ಈ ಚರಿತ್ರೆ ರಚನೆಯೊಂದಿಗೆ ಈ ಯೋಜನೆ ತಯಾರಾಗುತ್ತಿದೆ.

ಮಂಜೇಶ್ವರ, ಕುಂಬಳೆ, ಬದಿಯಡ್ಕ ಪ್ರದೇಶಗಳು ಸೇರುವ ಗಡಿವಲಯದ ಸಾವಿರಾರು ವರ್ಷಗಳ ಮಹತ್ವದ ಆಗುಹೋಗುಗಳನ್ನು ಈ ಚರಿತ್ರೆಯಲ್ಲಿ ದಾಖಲಿಸಲಾಗುವುದು. ಯೋಜನೆಯ ಪ್ರಧಾನ ಸಂಪಾದಕರಾಗಿರುವ, ಕಣ್ಣೂರು ವಿವಿಯ ಕಾಸರಗೋಡು ವಿದ್ಯಾನಗರದ ಚಾಲ ಕ್ಯಾಂಪಸ್‌ನ ನಿರ್ದೇಶಕ ಡಾ| ರಾಜೇಶ್‌ ಬೆಜ್ಜಂಗಳ ಅವರ ನೇತೃತ್ವದಲ್ಲಿ ಈ ಇತಿಹಾಸ ರಚನೆ ಆರಂಭಗೊಂಡಿದೆ.

ಜನಮಾನಸದಿಂದ ಇಲ್ಲಿನ ಐತಿಹಾಸಿಕ ಅಂಶಗಳು ಮಾಸಿಹೋಗದಂತೆ ಅಕಾಡೆ ಮಿಕ್‌ ರೂಪದಲ್ಲಿ ದಾಖಲೀಕರಣ ಇದರ ಮೂಲ ಉದ್ದೇಶ ಎಂದು ಡಾ| ಬೆಜ್ಜಂಗಳ ಅಭಿಪ್ರಾಯಪಡುತ್ತಾರೆ. ಪ್ರತಿ ವಿಚಾರ ಗಳ ಕುರಿತು ಸುಮಾರು 300 ಲೇಖನಗಳು ಈ ಗ್ರಂಥದಲ್ಲಿರುವುದು. ಈ ವರ್ಷ ಮೇ ತಿಂಗಳಲ್ಲಿ ಸಂಶೋಧನಾ ಲೇಖನಗಳು ಸಲ್ಲಿಕೆಯಾಗಲಿವೆ. ಈ ಲೇಖನಗಳ ಸೂûಾ¾ವಲೋಕನ ನಂತರ ಎಪಿಗ್ರಾಫಿಕ್‌ ಕ್ರೋಢೀಕರಣ ನಡೆಸಿ ಆಗಸ್ಟ್‌ ತಿಂಗಳಲ್ಲಿ ಗ್ರಂಥ ಲೋಕಾರ್ಪಣೆ ನಡೆಸುವ ಉದ್ದೇಶವಿದೆ ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. ಮೊದಲ ಹಂತದಲ್ಲಿ ಕನ್ನಡ ಬಾಷೆಯಲ್ಲಿ ಈ ಗ್ರಂಥ ಸಿದ್ಧವಾಗಲಿದೆ. ನಂತರ ಮಲೆಯಾಳ ಮತ್ತು ಇಂಗ್ಲೀಷ್‌ನಲ್ಲೂ ಅನುವಾದಗೊಳ್ಳಲಿದೆ.

ಸಮಗ್ರ ದಾಖಲೀಕರ
ವಿವಿಧ ಸಾಂಸ್ಕೃತಿಕ ಧಾರೆಗಳಾದ ಪ್ರತ್ಯೇಕ ವಲಯಗಳ ಇತಿಹಾಸ, ಐತಿಹಾಸಿಕ ಪುರುಷರು, ಭಾಷಾ ವೈವಿಧ್ಯ, ಧಾರ್ಮಿಕ, ಮತೀಯ ಪಂಗಡಗಳು, ಕೃಷಿ, ವ್ಯಾಪಾರ, ಉದ್ದಿಮೆ-ಆರ್ಥಿಕ ವ್ಯವಹಾರಗಳು, ನೂರಾರು ವರ್ಷಗಳ ಇತಿಹಾಸ ಹೊಂದಿರುವ ಶಿಕ್ಷಣ ಸಂಸ್ಥೆಗಳು, ಕಲಾಪ್ರಕಾರಗಳ ಚರಿತ್ರೆ ಸಹಿತ ಸಮಗ್ರ ವಿಚಾರಗಳು ಈ ರಚನೆಯಲ್ಲಿ ಅಳವಡಗೊಳ್ಳಲಿವೆ. ಮಂಜೇಶ್ವರದ ಸಾಂಸ್ಕೃತಿಕ ವೈವಿಧ್ಯ ಬಗ್ಗೆ ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ರೆಫೆರೆನ್ಸ್‌ ಗ್ರಂಥ ರೂಪದಲ್ಲಿ ಇದು ಪ್ರಯೋಜನಕಾರಿಯಾಗುವಂತೆ ಇದರ ಸಿದ್ಧತೆ ನಡೆಯುತ್ತಿದೆ.
– ಡಾ| ರಾಜೇಶ್‌ ಬೆಜ್ಜಂಗಳ,
ನಿರ್ದೇಶಕ, ಕಣ್ಣೂರು ವಿವಿಯ ಚಾಲ ಕ್ಯಾಂಪಸ್‌

Advertisement

5 ಲಕ್ಷ ರೂ. ಮಂಜೂರು
ಮಂಜೇಶ್ವರದ ಸಮಗ್ರ ಇತಿಹಾಸ ರಚನೆ ಯೋಜನೆಯ ಮೊದಲ ಹಂತವಾಗಿ 5 ಲಕ್ಷ ರೂ. ಮಂಜೂರು ಮಾಡಲಾಗಿದೆ.
– ಎ.ಕೆ.ಎಂ.ಅಶ್ರಫ್‌,
ಅಧ್ಯಕ್ಷ, ಮಂಜೇಶ್ವರ ಬ್ಲಾಕ್‌ ಪಂಚಾಯತ್‌

Advertisement

Udayavani is now on Telegram. Click here to join our channel and stay updated with the latest news.

Next