Advertisement

‘ರಂಗ ಸಮುದ್ರ’ದಲ್ಲೊಂದು ಕಾಮಿಡಿ ಪ್ರೇಮಗೀತೆ

05:20 PM Feb 20, 2023 | Team Udayavani |

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ರೆಟ್ರೋ ಥೀಮ್‌ ಇಟ್ಟುಕೊಂಡು ಬರುತ್ತಿರುವ ಸಿನಿಮಾಗಳ ಸಂಖ್ಯೆ ನಿಧಾನವಾಗಿ ಹೆಚ್ಚಾಗುತ್ತಿದೆ. ಇಂಥ ಸಿನಿಮಾಗಳ ಸಾಲಿಗೆ ಈಗ ಹೊಸದಾಗಿ ಸೇರ್ಪಡೆಯಾಗುತ್ತಿರುವ ಮತ್ತೂಂದು ಸಿನಿಮಾ “ರಂಗಸಮುದ್ರ’. ರಂಗಾಯಣ ರಘು, ಸಂಪತ್‌ ರಾಜ್‌, ಗುರುರಾಜ್‌ ಹೊಸಕೋಟೆ, ಮೋಹನ್‌ ಜುನೇಜಾ, ಉಗ್ರಂ ಮಂಜು, ಕಾರ್ತಿಕ್‌ ರಾವ್‌, ಮೂಗು ಸುರೇಶ್‌, ದಿವ್ಯ ಗೌಡ, ಸ್ಕಂದ, ಮಹೇಂದ್ರ ಮೊದಲಾದವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ “ರಂಗಸಮುದ್ರ’ ಸಿನಿಮಾದ “ಹೋಗತ್ಲಾಗ…’ ಎಂಬ ಕಾಮಿಡಿ ಪ್ರೇಮಗೀತೆ “ವ್ಯಾಲೆಂಟೈನ್ಸ್‌ ಡೇ’ ಸಂದರ್ಭದಲ್ಲಿ ಬಿಡುಗಡೆಯಾಗಿದೆ.

Advertisement

ದೇಸಿ ಮೋಹನ್‌ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಉತ್ತರ ಕರ್ನಾಟಕ ಭಾಷೆಯಲ್ಲಿ ವಾಗೀಶ್‌ ಚನ್ನಗಿರಿ ಬರೆದಿರುವ “ಹೋಗತ್ಲಾಗ…’ ಗೀತೆಯನ್ನು ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇತ್ತೀಚೆಗಷ್ಟೇ “ರಂಗ ಸಮುದ್ರ’ ಸಿನಿಮಾದಲ್ಲಿ ಕೈಲಾಶ್‌ ಖೇರ್‌ ಹಾಡಿರುವ “ಕೈಲಾಸ ಭೂಮಿಗಿಳಿದು…’ ಎಂಬ ಮೊದಲ ಗೀತೆ ಬಿಡುಗಡೆಯಾಗಿತ್ತು. ಇದೀಗ ಸಿನಿಮಾದ ಎರಡನೆಯ ಲಿರಿಕಲ್‌ ವಿಡಿಯೋ ಸಾಂಗ್‌ “ಝೇಂಕಾರ್‌ ಮ್ಯೂಸಿಕ್‌’ ಯೂ-ಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

ಅಂದಹಾಗೆ,”ರಂಗ ಸಮುದ್ರ’ ಸಿನಿಮಾದಲ್ಲಿ ನಟ ಪುನೀತ್‌ ರಾಜಕುಮಾರ್‌ ಅತಿಥಿ ಪಾತ್ರವೊಂದಲ್ಲಿ ಅಭಿನಯಿಸಲು ಒಪ್ಪಿಕೊಂಡಿದ್ದರು. ಆದರೆ, ಪುನೀತ್‌ ರಾಜಕುಮಾರ್‌ ನಿಧನದ ನಂತರ ಸಿನಿಮಾದ ಅದೇ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್‌ ಅಭಿನಯಿಸಿದ್ದಾರೆ. ರಾಜಕುಮಾರ್‌ ಅಸ್ಕಿ ನಿರ್ದೇಶನದ “ರಂಗ ಸಮುದ್ರ’ ಸಿನಿಮಾವನ್ನು ಹೊಯ್ಸಳ ಕೊಣನೂರು ನಿರ್ಮಿಸುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಬೇಸಿಗೆ ವೇಳೆಗೆ “ರಂಗ ಸಮುದ್ರ’ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

Advertisement

Udayavani is now on Telegram. Click here to join our channel and stay updated with the latest news.

Next