Advertisement

Nehru ಕಾಲದಲ್ಲಿ ಕಬಳಿಸಿದ್ದ ಹಳ್ಳಿಯಲ್ಲಿ ಚೀನ ಗ್ರಾಮ: ಸಚಿವ ಜೈಶಂಕರ್‌ ತಿರುಗೇಟು

01:59 AM May 18, 2024 | Team Udayavani |

ಹೊಸದಿಲ್ಲಿ: ಭಾರತದ ಗಡಿಭಾಗಗಳಲ್ಲಿ ಚೀನ ಇವತ್ತು ಮಾಡುತ್ತಿರುವ ನಿರ್ಮಾಣಗಳಿಗೆ ದೇಶದ ಮೊದಲ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ ಅವರೇ ಕಾರಣ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ವಾಗ್ಧಾಳಿ ನಡೆಸಿದ್ದಾರೆ. ಈಗ ಕಾಂಗ್ರೆಸ್‌ ಅರುಣಾಚಲ ಪ್ರದೇಶದ ಸನಿಹದ ಲಾಂಗ್ಚು, ಪಾಕ್‌ ಆಕ್ರಮಿತ ಕಾಶ್ಮೀರದ ಸಿಯಾಚಿನ್‌ನಲ್ಲಿನ ಚೀನ ನಿರ್ಮಾಣಗಳ ಬಗ್ಗೆ ಮಾತಾಡುತ್ತಿದೆ.

Advertisement

ಲಾಂಗ್ಚು ಹಳ್ಳಿಯನ್ನು ಚೀನ 1962ರಲ್ಲಿ ಪೂರ್ಣವಾಗಿ ವಶಪಡಿಸಿಕೊಂಡಿತ್ತು. ಈಗ ಅಲ್ಲಿ ಮಾದರಿ ಗ್ರಾಮ ನಿರ್ಮಿಸುತ್ತಿದೆ. ಇನ್ನು ಪ್ಯಾಂಗಾಂಗ್‌ ತ್ಸೋ ಸರೋವರದ ಬಳಿ ನಿರ್ಮಿಸುತ್ತಿರುವ ಸೇತುವೆ ಪ್ರದೇಶವನ್ನು (ಖುರ್ನಾಕ್‌ ಕೋಟೆ) 1962ರ ಯುದ್ಧದಲ್ಲಿ ಅಕ್ರಮವಾಗಿ ವಶಪಡಿಸಿಕೊಂಡಿತ್ತು ಎಂದು ಜೈಶಂಕರ್‌ ಹೇಳಿದ್ದಾರೆ.

“ಸಿಯಾಚಿನ್‌ ಸನಿಹದ ಶಕ್ಸ್‌ಗಾಮ್‌ನಲ್ಲಿ ಚೀನ ರಸ್ತೆ ನಿರ್ಮಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. 1949ರಲ್ಲಿ ಪಾಕ್‌ನೊಂದಿ ಗೆ ಕದನವಿರಾಮಕ್ಕೆ ಸಹಿ ಹಾಕಿ, ಭಾರತೀಯ ಸೇನೆ ಮುಂದಕ್ಕೆ ನುಗ್ಗುವುದನ್ನು ನೆಹರೂ ನಿಲ್ಲಿಸಿದರು. ಆ ಮೂಲಕ ತಾವಾಗಿಯೇ ಈ ಕಣಿವೆ ಯನ್ನು ಪಾಕ್‌ಗೆ ಬಿಟ್ಟುಕೊಟ್ಟರು. 1963ರಲ್ಲಿ ಪಾಕ್‌ ವಿದೇಶಾಂಗ ಸಚಿವ ಪಿಒಕೆಯ 5,180 ಚದರ ಕಿ.ಮೀ. ಪ್ರದೇಶವನ್ನು ಚೀನಕ್ಕೆ ಹಸ್ತಾಂತರಿಸಿದರು’ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next