Advertisement

ಸಂಭ್ರಮದ ಕ್ರಿಸ್ಮಸ್‌ ಆಚರಣೆ; ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ

12:32 AM Dec 26, 2019 | Sriram |

ಮಹಾನಗರ: ಯೇಸು ಕ್ರಿಸ್ತರ ಜನನದ ಹಬ್ಬವಾದ ಕ್ರಿಸ್ಮಸ್‌ ಹಬ್ಬವನ್ನು ಬುಧವಾರ ನಗರದೆಲ್ಲೆಡೆ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

Advertisement

ಜಗತ್ತಿನ ಎಲ್ಲೆಡೆ ನಡೆಯುವಂತೆ “ಪೂರ್ವದ ರೋಮ್‌’ ಎಂದು ಪರಿಗಣಿತವಾಗಿರುವ ಮಂಗಳೂರಿನಲ್ಲಿ ಕ್ರಿಸ್ಮಸ್‌ ಆಚರಣೆ ಜೋರಾಗಿತ್ತು. ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿನ ವಿವಿಧ ಚರ್ಚ್‌ಗಳು ವಿದ್ಯುತ್‌ ದೀಪಗಳಿಂದ ಅಲಂಕೃತಗೊಂಡಿದ್ದವು.

ಯೇಸು ಕ್ರಿಸ್ತರು ದನದ ಹಟ್ಟಿಯಲ್ಲಿ ಜನಿಸಿದರು ಎನ್ನುವುದರ ಸಂಕೇತವಾಗಿ ಚರ್ಚ್‌ಗಳಲ್ಲಿ ಮತ್ತು ಕ್ರೈಸ್ತರ ಮನೆಗಳಲ್ಲಿ ಆಕರ್ಷಕ ಗೋದಲಿ (ಕ್ರಿಬ್‌)ಗಳು ನಿರ್ಮಾಣಗೊಂಡಿದ್ದವು.
ಪರ ಊರಿನಲ್ಲಿರುವ ಮತ್ತು ವಿದೇಶಗಳಲ್ಲಿರುವ ಕುಟುಂಬದ ಸದಸ್ಯರು ಹಬ್ಬಕ್ಕೂ ಮುಂಚಿತವಾಗಿಯೇ ಊರಿಗೆ ಆಗಮಿಸಿ ಮನೆಮಂದಿಯೊಂದಿಗೆ ಸೇರಿ ಹಬ್ಬ ಆಚರಣೆ ಮಾಡಿ ಸಂಭ್ರಮಿಸಿದರು.

ಬಲಿಪೂಜೆ, ಪ್ರಾರ್ಥನೆ, ವೃಂದಗಾಯನ
ಕರಾವಳಿಯ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ ಹಾಗೂ ಪ್ರಾರ್ಥನೆ ನೆರವೇರಿತು. ಯೇಸುಕ್ರಿಸ್ತರ ಜನನ ಸಡಗರವನ್ನು ಕೊಂಡಾಡುವ ಗೀತೆಗಳ ವೃಂದಗಾಯನ ನಡೆಯಿತು. ಮನೆಗಳ ಮುಂಭಾಗ ದಲ್ಲಿ ವರ್ಣರಂಜಿತ ನಕ್ಷತ್ರಗಳನ್ನು ತೂಗು ಹಾಕ ಲಾಗಿದ್ದು, ಬಣ್ಣ ಬಣ್ಣದ ವಿದ್ಯುತ್‌ ದೀಪಗಳು ಝಗಮಗಿಸುತ್ತಿದ್ದವು.

ಕ್ರೈಸ್ತ ಬಾಂಧವರು ಪರಸ್ಪರ ಕ್ರಿಸ್ಮಸ್‌ ಕೇಕ್‌ ಮತ್ತಿತರ ತಿಂಡಿಗಳನ್ನು ಹಂಚಿ ಸಂಭ್ರಮಿಸಿದರು.

Advertisement

ಸೈಂಟ್‌ ಆ್ಯಗ್ನೆಸ್‌ ಸ್ಪೆಷಲ್‌ ಸ್ಕೂಲ್‌
ಬೈಂದೂರು: ಸೈಂಟ್‌ ಆ್ಯಗ್ನೆಸ್‌ ಸ್ಪೆಷಲ್‌ ಸ್ಕೂಲ್‌ನಲ್ಲಿ ಕ್ರಿಸ್ಮಸ್‌ ಹಬ್ಬವನ್ನು ಆಚರಿಸಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ಜ್ಯೂಡಿಸಿಯಲ್‌ ವಿಕಾರ್‌ ವಂ| ವಾಲ್ಟರ್‌ ಡಿಮೆಲ್ಲೋ ಮುಖ್ಯ ಅತಿಥಿಯಾಗಿದ್ದರು. ಎಲಾಯಸ್‌ ಸಾಂತಿಸ್‌ ಅತಿಥಿಯಾಗಿದ್ದರು. ಕ್ಯಾರಲ್ಸ್‌ ಹಾಡುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸ್ಟಾರ್‌ ತಯಾರಿಸುವ ಸ್ಪರ್ಧೆಯಲ್ಲಿ ಸುಮಾರು 50 ವಿಶೇಷ ಮಕ್ಕಳು ಪಾಲ್ಗೊಂಡಿದ್ದರು.

ಆಶೆಲ್‌ ಪ್ರಥಮ, ಫಾಹಜ್‌ ದ್ವಿತೀಯ ಹಾಗೂ ಅಣ್ಣಾಮಲೈ ತೃತೀಯ ಬಹುಮಾನ ಪಡೆದರು. ಶಾಲಾ ಸ್ವರ್ಣ ಮಹೋತ್ಸವದ ಅಂಗವಾಗಿ ಶಾಲಾ ಲಾಂಛನವನ್ನು ಹೊಂದಿರುವ ಶಾಲಾ ಬ್ಯಾಗ್‌ಗಳನ್ನು ಎಲ್ಲ ವಿಶೇಷ ಮಕ್ಕಳಿಗೆ ನೀಡಲಾಯಿತು. ಭ| ಮರಿಯಾ ಸೋನಲ್‌, ನಾರಾಯಣ್‌, ಜೋತ್ಸಾ °, ಶಾಂತಿ ಕಾರ್ಯಕ್ರಮ ನಡೆಸಿಕೊಟ್ಟರು. ಸಾಂತಾಕ್ಲಾಸ್‌ ಜತೆ ವಿಶೇಷ ಮಕ್ಕಳು ಕುಣಿದು ಕುಪ್ಪಳಿಸಿದರು. ಶಾಲಾ ಜಂಟಿ ಕಾರ್ಯದರ್ಶಿ ಭ| ಮರಿಯಾ ಅನಿಟಾ, ಶಾಲಾ ಪ್ರಾಂಶುಪಾಲೆ ಭ| ಮರಿಯಾ ಶ್ರುತಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next