Advertisement

Mobile ಅಂಗಡಿಯಲ್ಲಿ ಕಳ್ಳತನ ಪ್ರಕರಣ; ಓರ್ವ ಬಂಧನ

09:32 PM Feb 06, 2024 | Team Udayavani |

ಆಲಂಕಾರು: ರಾಜ್ಯ ಹೆದ್ದಾರಿಯ ಬದಿಯಲ್ಲಿರುವ ಶ್ರೀ ದುರ್ಗಾ ಟವರ್‌ನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೊಬೈಲ್‌ ಅಂಗಡಿಯ ಬೀಗ ಮುರಿದ ಕಳ್ಳರು ಮೊಬೈಲ್‌ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಬಂಧಿಸಲಾಗಿದೆ.

Advertisement

ಸಾನಿಧ್ಯ ಮೊಬೈಲ್‌ ಅಂಗಡಿಯಿಂದ ಕಳವು ಮಾಡಿದ ದೃಶ್ಯ ಸ್ಥಳೀಯ ಅಡಿಕೆ ಅಂಗಡಿಯ ಸಿ.ಸಿ. ಕೆಮರಾದಲ್ಲಿ ಸೆರೆಯಾಗಿತ್ತು. ಅದರ ಆಧಾರದಲ್ಲಿ ಕಡಬ ಪೋಲಿಸರು ಪರೀಶಿಲನೆ ನಡೆಸಿದಾಗ ಆತ ಹೊರ ರಾಜ್ಯದಿಂದ ಬಂದಿದ್ದು ನೆಕ್ಕರೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವುದು ತಿಳಿದು ಬಂದಿದೆ. ಆತನನ್ನು ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next