Advertisement

Uppunda: ಹಲ್ಲೆ, ಚಿನ್ನಾಭರಣ ಕಳವು ಪ್ರಕರಣ ದಾಖಲು

07:41 PM Aug 06, 2024 | Team Udayavani |

ಉಪ್ಪುಂದ: ಕಾಲ್ತೋಡು ಗ್ರಾಮದ ಬೊಳಂಬಳ್ಳಿ ನಿವಾಸಿ ನಾಗರಾಜ ರವರ ಮನೆಯಲ್ಲಿ ಶನಿವಾರ (ಆ.3) ಕಳ್ಳತನವಾಗಿದ್ದು ದೂರು ದಾಖಲಿಸಲಾಗಿದೆ.

Advertisement

ಇತ್ತೀಚಿಗಷ್ಟೇ ಸಂಬಂಧಿಕರಾದ ಪ್ರದೀಪ್‌ ಎನ್ನುವಾತ  ಸೀತಾರಾಮ, ಗಂಗಾಧರ ಮತ್ತು ಹರೀಶ್‌ ವರಿಗೆ ಹಲ್ಲೆ ನಡೆಸಿದ್ದು,  ಆ.3ರಂದು ಬ್ಯಾಂಕ್‌ ಗೆ ಹೋದ ಸಂದರ್ಭ ಮನೆಯಲ್ಲಿ ಕಳ್ಳತನವಾಗಿರುವುದು ತಿಳಿದು ಬಂದಿದೆ. ಮನೆಯ ಕಪಾಟಿನಲ್ಲಿ ಇರಿಸಿದ್ದ ಪರ್ಸು, ಅದರಲ್ಲಿರುವ ಬ್ಯಾಂಕ್‌ ಪಾಸ್‌ ಪುಸ್ತಕ, 4 ಗ್ರಾಂ ತೂಕದ ಕಿವಿಯೊಲೆ, ಬೆಳ್ಳಿಯ ಕಾಲ್ಗೆಜ್ಜೆ ಮತ್ತು 2 ಚೆಕ್‌ ಪುಸ್ತಕಗಳು ಕಳವಾಗಿರುವುದಾಗಿ ಕಂಡುಬಂದಿದೆ.

ಹಲ್ಲೆ ನಡೆಸಿದವರೇ ಕಳವು ಮಾಡಿರುವುದಾಗಿ ಸಂಶಯಿಸಿದ ಮನೆಯವರು 23000 ರೂ. ಮೌಲ್ಯದ ವಸ್ತುಗಳು ಕಳುವಾಗಿದೆ ಎಂದು ಸದ್ಯ ಬೈಂದೂರು ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next