Advertisement

ಔತಣಕೂಟದಿಂದ ಬರುತ್ತಿದ್ದವರ ಕಾರು ಪಲ್ಟಿ; ಮಹಿಳೆ ಸಾವು, ಮಗು ಸೇರಿ 8 ಮಂದಿಗೆ ಗಂಭೀರ ಗಾಯ

12:53 PM Apr 21, 2022 | Team Udayavani |

ಹಲಗೂರು (ಮಂಡ್ಯ): ಹಲಗೂರು ಸಮೀಪದ ಲಂಬಾಣಿ ಹೊಸದೊಡ್ಡಿ ಹಾಗೂ ಕೃಷ್ಣೇಗೌಡನ ದೊಡ್ಡಿ ಮಾರ್ಗಮಧ್ಯೆ ಮುತ್ತತ್ತಿ ಬಳಿ ಕಾರು ಪಲ್ಟಿಯಾಗಿ ಸ್ಥಳದಲ್ಲೇ ಮಹಿಳೆಯೊಬ್ಬರು ಮೃತಪಟ್ಟು ಎಂಟು ಮಂದಿ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.

Advertisement

ಸಮೀಪದ ಮುತ್ತತ್ತಿಯಲ್ಲಿ ಬೀಗರ ಔತಣಕೂಟ ಮುಗಿಸಿ ಹಿಂದಿರುಗುವಾಗ ಲಂಬಾಣಿ ಹೊಸ ದೊಡ್ಡಿ ಮತ್ತು ಕೃಷ್ಣೇಗೌಡನ ದೊಡ್ಡಿಯ ಮಾರ್ಗ ಮಧ್ಯೆ ಕಾರಿನ ಹಿಂಭಾಗದ ಚಕ್ರ ಸ್ಫೋಟಗೊಂಡ ಕಾರಣ ಈ ಘಟನೆ ಸಂಭವಿಸಿದೆ.

ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕು ಸಾತನೂರು ಹೋಬಳಿಯ ಕಬ್ಬಾಳು ಗ್ರಾಮದ ವೀರಭದ್ರ ಗೌಡರ ಪತ್ನಿ ನಾಗಮ್ಮ (45 ವ) ಎಂಬುವವರು ಮೃತ ಪಟ್ಟ ದುರ್ದೈವಿ.

ಇದನ್ನೂ ಓದಿ:ಗಂಗಾವತಿಗೆ ಇಕ್ಬಾಲ್ ಅನ್ಸಾರಿ ಕೈ ಅಭ್ಯರ್ಥಿ ವರಿಷ್ಠರ ನಿರ್ಧಾರ :ಶಾಸಕ ಹಿಟ್ನಾಳ್

ಕಾರಿನಲ್ಲಿದ್ದ ಕನಕಪುರ ತಾಲ್ಲೂಕು ಮಲ್ಲಪುರ ಗ್ರಾಮದ  ಕುಮಾರ್ (27), ಸುಮಿತ್ರ (37), ಸುಜಾತ (30), ಪುಷ್ಪ (25), ಪೂಜಾ (18), ಕೆಂಪಮ್ಮ (47) ಇಬ್ಬರು ಮಕ್ಕಳು ನಕ್ಷತ್ರ (02), ಆಯುಷ್ (04) ಗಂಭೀರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಮಳವಳ್ಳಿ ತಾಲ್ಲೂಕು ಆಸ್ಪತ್ರೆಗೆ  ದಾಖಲಿಸಲಾಗಿದೆ.

Advertisement

ಈ ಸಂಬಂಧಿಸಿದಂತೆ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next