Advertisement

ಆಮ್ನಿಗೆ ಬಸ್‌ ಢಿಕ್ಕಿ : ಓರ್ವ ಸಾವು

10:35 AM Nov 19, 2017 | |

ಉಪ್ಪಿನಂಗಡಿ : ಇಚ್ಲಂಪಾಡಿ ಗ್ರಾಮದ ಅಲಂಗದಲ್ಲಿ ಶನಿವಾರ ಯಾತ್ರಾರ್ಥಿಗಳಿದ್ದ ಆಮ್ನಿಗೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್‌ ಢಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕ ಸಾವನ್ನಪ್ಪಿ ಇತರ 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

Advertisement

ಕಾರ್ಕಳ ತಾಲೂಕು ಮುನಿಯಾಲು – ಅಂಡಾರು ಗ್ರಾಮದ ಮೊಟ್ಲುಪ್ಪಾಡಿ ನಿವಾಸಿ  ರಾಜು ಶೆಟ್ಟಿ ಅವರ ಪುತ್ರ ಸಂದೇಶ್‌ ಶೆಟ್ಟಿ (28) ಮೃತಪಟ್ಟವರು. ಮುನಿಯಾಲುವಿನಿಂದ ಬಂಧುಗಳನ್ನು ಕುಳ್ಳಿರಿಸಿ ಸುಬ್ರಹ್ಮಣ್ಯದತ್ತ ಸಂಚರಿಸುತ್ತಿದ್ದಾಗ ಸುಬ್ರಹ್ಮಣ್ಯ ದಿಂದ ಧರ್ಮಸ್ಥಳದತ್ತ ಸಂಚರಿಸುತ್ತಿದ್ದ ಖಾಸಗಿ ಬಸ್‌ ಕಾರಿಗೆ ಢಿಕ್ಕಿ ಹೊಡೆಯಿತು. 

ಈ ಪರಿಣಾಮ ತಲೆಗೆ ಗಂಭೀರ ವಾಗಿ ಗಾಯಗೊಂಡ ಸಂದೇಶ್‌ ಶೆಟ್ಟಿ ಸ್ಥಳದಲ್ಲೇ ಮೃತಪಟ್ಟರು. ಕಾರಿನಲ್ಲಿದ್ದ  ಮಹೇಶ್‌ ಶೆಟ್ಟಿ (35), ಸುಕಿನ್‌ ಶೆಟ್ಟಿ (18), ಗಿರಿಜಾ ಶೆಟ್ಟಿ (62) , ಜಲಜಾಕ್ಷಿ (54),  ಪ್ರಭಾಕರ (50) ,ವಿಶಾಲ್‌ ಶೆಟ್ಟಿ (56) ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next