Advertisement

ಪ್ರಶಸ್ತಿ ಹಣ ಸಸಿ ನೆಡಲು ಕೊಟ್ಟ ಬಾಲಕ: ಜಿಲ್ಲಾಧಿಕಾರಿ ಮೆಚ್ಚುಗೆ

09:51 AM Jul 06, 2019 | Team Udayavani |

ಬಾಗಲಕೋಟೆ: ಚಿತ್ರಕಲೆ ಸ್ಪರ್ಧೆಯೊಂದರಲ್ಲಿ ನಗದು ಬಹುಮಾನ ಪಡೆದಿದ್ದ ವಿದ್ಯಾರ್ಥಿಯೊಬ್ಬ ಆ ಹಣವನ್ನು ತಾನು ಕಲಿಯುವ ಶಾಲೆ ಆವರಣದಲ್ಲಿ ಸಸಿ ನೆಡಲು ಬಳಕೆ ಮಾಡಿದ್ದು, ಈ ಕಾರ್ಯವನ್ನು ಜಿಲ್ಲಾಧಿಕಾರಿ ಶ್ಲಾಘಿಸಿದ್ದಾರೆ.

Advertisement

ಕೇಂದ್ರಿಯ ವಿದ್ಯಾಲಯದ 5ನೇ ತರಗತಿ ವಿದ್ಯಾರ್ಥಿ ಸಮರ್ಥ ಪರಾಂಡೆ ಎಂಬ ವಿದ್ಯಾರ್ಥಿ, ಈಚೆಗೆ ಲೈನ್ಸ್‌ ಕ್ಲಬ್‌ನಿಂದ ಹಮ್ಮಿಕೊಂಡಿದ್ದ ಚಿತ್ರಕಲೆ ಬಿಡಿಸುವ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದಿದ್ದ. 1ನೇ ಸ್ಥಾನ ಪಡೆದ ವಿದ್ಯಾರ್ಥಿ ಸಮರ್ಥಗೆ, ಲೈನ್ಸ್‌ ಕ್ಲಬ್‌ನಿಂದ 1,500 ನಗದು ಬಹುಮಾನ ನೀಡಲಾಗಿತ್ತು.

ಈ ಬಹುಮಾನದ ಹಣವನ್ನು, ಕೇಂದ್ರೀಯ ವಿದ್ಯಾಲಯ ಆವರಣದಲ್ಲಿ ಸಸಿ ನೆಡುವ ಉದ್ದೇಶಕ್ಕಾಗಿ ಶಾಲೆಗೆ ನೀಡಿದ್ದು, ಶಾಲೆಯ ಪ್ರಾಚಾರ್ಯರು ಮತ್ತು ಸಿಬ್ಬಂದಿ, ವಿದ್ಯಾರ್ಥಿ ನೀಡಿದ ಹಣದಲ್ಲಿ ಬೇವು, ಹುಣಸೆ ಸೇರಿದಂತೆ ವಿವಿಧ ಜಾತಿಯ 50 ಸಸಿಗಳನ್ನು ತರಿಸಿ, ಶಾಲೆಯ ಆವರಣದಲ್ಲಿ ನೆಟ್ಟಿದ್ದಾರೆ.

ವಿದ್ಯಾರ್ಥಿಯ ಪರಿಸರ ಸ್ನೇಹಿ ಕಾರ್ಯಕ್ಕೆ ಕೇಂದ್ರೀಯ ವಿದ್ಯಾಲಯದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಆರ್‌. ರಾಮಚಂದ್ರನ್‌, ಶಾಲೆಗೆ ಆಗಮಿಸಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿದರು. ಅಲ್ಲದೇ ವಿದ್ಯಾರ್ಥಿ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next