Advertisement

Tamil Nadu: ಕ್ಯಾಬ್‌ ಚಾಲಕನ ಖಾತೆಗೆ 9 ಸಾವಿರ ಕೋಟಿ: ಬ್ಯಾಂಕ್‌ ಎಂಡಿ ರಾಜೀನಾಮೆ

12:23 AM Sep 30, 2023 | Team Udayavani |

ಚೆನ್ನೈ: ತಮಿಳುನಾಡು ಮರ್ಕಂಟೈಲ್‌ ಬ್ಯಾಂಕ್‌ (ಟಿಎಂಬಿ)ನ ವ್ಯವಸ್ಥಾಪಕ ನಿರ್ದೇಶಕ(ಎಂಡಿ) ಮತ್ತು ಸಿಇಒ ಎಸ್‌.ಕೃಷ್ಣನ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಚೆನ್ನೈಯ ಕ್ಯಾಬ್‌ ಚಾಲಕರೊಬ್ಬರ ಖಾತೆಗೆ ಟಿಎಂಬಿ ತಪ್ಪಾಗಿ 9,000 ಕೋಟಿ ರೂ. ಕ್ರೆಡಿಟ್‌ ಮಾಡಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.

Advertisement

“ಇನ್ನೂ ನಿವೃತ್ತಿಗೆ ಹಲವು ತಿಂಗಳುಗಳು ಬಾಕಿ ಇದ್ದರೂ ವೈಯಕ್ತಿಕ ಕಾರಣಗಳಿಂದ ಬ್ಯಾಂಕ್‌ನ ಎಂಡಿ ಮತ್ತು ಸಿಇಒ ಹುದ್ದೆಗೆ ರಾಜೀನಾಮೆ ಸಲ್ಲಿಸಲು ನಿರ್ಧರಿಸಿದ್ದೇನೆ’ ಎಂದು ಕೃಷ್ಣನ್‌ ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ. 2022ರ ಸೆಪ್ಟಂಬರ್‌ನಲ್ಲಿ ಕೃಷ್ಣನ್‌ ಅವರು ಟಿಎಂಬಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ತೂತುಕುಡಿ ಮೂಲದ ಬ್ಯಾಂಕ್‌ನ ಮಂಡಳಿಯ ನಿರ್ದೇಶಕರು ಈ ಸಂಬಂಧ ಗುರುವಾರ ಸಭೆ ನಡೆಸಿ, ಕೃಷ್ಣನ್‌ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದು, ಅದನ್ನು ಆರ್‌ಬಿಐಗೆ ಕಳುಹಿಸಿದ್ದಾರೆ. ಕಳೆದ ಜೂನ್‌ನಲ್ಲಿ ಬ್ಯಾಂಕ್‌ನಲ್ಲಿ ಕೆಲವು ಅವ್ಯವಹಾರ ನಡೆದಿರುವ ಕುರಿತು ಐಟಿ ಇಲಾಖೆ ಪ್ರಶ್ನೆಯೆತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next