Advertisement

Borewell: ಬರದ ಮಧ್ಯೆ ಜಲಮಂಡಳಿ ಕೊರೆಸಿದ ಶೇ.90 ಬೋರ್‌ಗಳು ಸಕ್ಸಸ್‌

01:21 PM May 03, 2024 | Team Udayavani |

ಬೆಂಗಳೂರು: ಹೊಸತನದ ತಂತ್ರಜ್ಞಾನ ಅಳವಡಿಸಿ ಕೊಳ್ಳುವಲ್ಲಿ ಮುಂಚೂಣಿಯಲ್ಲಿರುವ ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡ ಳಿಯು ಹೊಸದಾಗಿ ಕೊರೆಸಿರುವ ಕೊಳವೆಬಾವಿಗಳಲ್ಲಿ ನೀರು ದೊರೆತಿದೆ.

Advertisement

ಇತ್ತೀಚೆಗೆ ಕೊರೆಸಲಾದ 144 ಬೋರ್‌ವೆಲ್‌ಗ‌ಳ ಪೈಕಿ 130 ಬೋರ್‌ವೆಲ್‌ಗ‌ಳಲ್ಲಿ ಉತ್ತಮ ನೀರು ಲಭ್ಯವಾಗುವ ಮೂಲಕ ಶೇ.90ರಷ್ಟು ಸಕ್ಸಸ್‌ ರೇಟ್‌ ಪಡೆದುಕೊಂಡಿದೆ. ಬೆಂಗಳೂರು ನಗರದಲ್ಲಿ ಅಂತರ್ಜಲ ಕೊರತೆ ಯಿಂದಾಗಿ ಆದಂತಹ ನೀರಿನ ಅಭಾವವನ್ನು ಸಮರ್ಥವಾಗಿ ನಿಭಾಯಿಸುವ ನಿಟ್ಟಿನಲ್ಲಿ ಬೆಂಗಳೂರು ಜಲ ಮಂಡಳಿಯು ಹಲವಾರು ಮುಂಜಾಗ್ರತಾ ಕ್ರಮ ಗಳನ್ನು ಅಳವಡಿಸಿಕೊಳ್ಳಲು ಮುಂದಾಗಿತ್ತು.

ಇದರಲ್ಲಿ ಅವಶ್ಯವಿರುವ ಕಡೆಗಳಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಸುವುದು ಕೂಡ ಒಂದಾಗಿದೆ. ಹೆಚ್ಚಿನ ತಂತ್ರಜ್ಞಾನ ಬಳಸದೇ ಇದ್ದಂತಹ ಸಂದರ್ಭದಲ್ಲಿ ಬಹಳಷ್ಟು ಕೊಳವೆ ಬಾವಿಗಳು ನೀರು ಸಿಗದೆ ವಿಫ‌ಲವಾಗಿದ್ದವು. ಇದರಿಂದ ಜಲಮಂಡಳಿಗೆ ಕೊಳವೆಬಾವಿ ಕೊರೆಸುವಲ್ಲಿ ಬಹಳಷ್ಟು ಆರ್ಥಿಕ ನಷ್ಟವಾಗುತ್ತಿತ್ತು. ಒಂದು ಕೊಳವೆಬಾವಿ ಕೊರೆಸುವ ಕಡೆಗಳಲ್ಲಿ ಇನ್ನೊಂದು, ಅದೂ ಯಶಸ್ಸು ಕಾಣದೇ ಇದ್ದಲ್ಲಿ ಮತ್ತೂಂದು ಹೀಗೆ ಮುಂದುವರಿಯುತ್ತಲೇ ಇತ್ತು.

130 ಬೋರ್‌ವೆಲ್‌ಗ‌ಳಲ್ಲಿ ನೀರು: ಇದಕ್ಕೆ ಉತ್ತರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಾಗೂ ಜಲಮಂಡಳಿಗೆ ಆರ್ಥಿಕವಾಗಿ ಹಣ ಉಳಿಸುವ ಉದ್ದೇಶದಿಂದ ಮಂಡಳಿಯ ಅಧ್ಯಕ್ಷ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ ನೂತನ ತಂತ್ರಜ್ಞಾನ ಹಾಗೂ ತಂತ್ರಜ್ಞರ ಸಹಾಯ ಪಡೆಯಲು ಮುಂದಾದರು. ಮೂರು ಭೂ ವಿಜ್ಞಾನಿಗಳ ಸೇವೆಯನ್ನು ಪಡೆಯುತ್ತಿರುವ ಜಲಮಂಡಳಿಯು ಇದೀಗ 144 ಬೋರ್‌ ವೆಲ್‌ ಗಳನ್ನು ಕೊರೆಯಿಸಿದ್ದು, ಈ ಪೈಕಿ 130 ಬೋರ್‌ವೆಲ್‌ ಗಳಲ್ಲಿ ಉತ್ತಮ ನೀರು ಲಭ್ಯವಾಗುವ ಮೂಲಕ ಶೇ.90ರಷ್ಟು ಸಕ್ಸಸ್‌ ರೇಟ್‌ ಪಡೆದುಕೊಂಡಿವೆ.

ಶೇ.90ರಷ್ಟು ಯಶಸ್ಸು ಬಹಳ ಕಷ್ಟ: ಜಲಮಂಡಳಿಯ ಕೊಳವೆಬಾವಿಗಳ ಇತಿಹಾಸದಲ್ಲಿ ಇದೊಂದು ಹೊಸ ಮೈಲುಗಲ್ಲಾಗಿದೆ. ಕೊರೆಸಿರುವ ಬೋರ್‌ವೆಲ್‌ಗ‌ಳಲ್ಲಿ ಶೇ.90ರಷ್ಟು ಸಕ್ಸಸ್‌ ಆಗುವುದು ಬಹಳ ಕಷ್ಟ. ಈ ಸಾಧನೆಗೆ ಭೂವಿಜ್ಞಾನಿಗಳ ಕೊಡುಗೆ ಅಪಾರ. ಅವರು ನಗರದ ಭೂಮಿಯನ್ನು ಅಧ್ಯಯನ ಮಾಡಿ ಅಕ್ವಾಫೈರ್‌ ಇರುವ ಸ್ಥಳಗಳನ್ನು ಗುರುತಿಸುವ ಕಾರ್ಯ ಮಾಡಿದ್ದರು. ಸಂಕಷ್ಟದ ಸಮಯದಲ್ಲಿ ಇಂತಹ ಉತ್ತಮ ಫ‌ಲಿತಾಂಶ ದೊರಕುವುದರಿಂದ ಬಹಳ ಸಂತಸವಾಗುತ್ತದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಬತ್ತುತ್ತಲೇ ಇವೆ ಕೊಳವೆ ಬಾವಿಗಳು

ಬೆಂಗಳೂರಿನಲ್ಲಿ ಶೇ.56ರಷ್ಟು ಕೊಳವೆ ಬಾವಿಗಳು ಬತ್ತಿ ಹೋದರೆ, ಇನ್ನುಳಿದ ಶೇ.20ರಷ್ಟು ಕೊಳವೆ ಬಾವಿಗಳಲ್ಲಿ ಕಡಿಮೆ ನೀರು ಬರುತ್ತಿದ್ದು, ಶೀಘ್ರದಲ್ಲೇ ಬತ್ತುವ ಲಕ್ಷಣ ಗೋಚರಿಸಿದೆ. ಬೆಂಗಳೂರಿನ ಶೇ.60ರಷ್ಟು ಮಂದಿ ಕೊಳವೆ ಬಾವಿಗಳನ್ನೇ ಆಶ್ರಯಿಸಿರುವ ಹಿನ್ನೆಲೆಯಲ್ಲಿ ನೀರಿಗಾಗಿ ಭಾರಿ ಬೆಲೆ ತೆತ್ತಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಚಾಲ್ತಿಯಲ್ಲಿರುವ ಶೇ.50ರಷ್ಟು ಕುಡಿಯುವ ಶುದ್ಧ ನೀರಿನ ಘಟಕಗಳಲ್ಲಿ ನೀರಿನ ಪ್ರಮಾಣ ಕಡಿಮೆಯಿದ್ದು, ದಿನದ ಕೆಲವು ಗಂಟೆ ಮಾತ್ರ ಸೇವೆ ನೀಡುತ್ತಿವೆ. ಈ ಘಟಕಗಳ ಮುಂದೆ ಕುಡಿಯುವ ನೀರಿಗಾಗಿ ಸಾರ್ವಜನಿಕರು ಸರದಿ ಸಾಲಿನಲ್ಲಿ ನಿಲ್ಲುತ್ತಿರುವ ದೃಶ್ಯ ಅಲ್ಲಲ್ಲಿ ಕಾಣ ಸಿಗುತ್ತವೆ. ವೈಟ್‌ ಫೀಲ್ಡ್‌, ಯಲಹಂಕ, ರಾಜ ರಾಜೇಶ್ವರಿನಗರ, ಮಹದೇವಪುರ, ಮಾರತ್ತಳ್ಳಿ, ಸರ್ಜಾಪುರ ರಸ್ತೆ ಪ್ರಮುಖ ಭಾಗಗಳಲ್ಲಿ ನೀರಿಗೆ ಬೇಡಿಕೆ ವ್ಯಕ್ತವಾಗುತ್ತಿದೆ.

ಸಾರ್ವಜನಿಕರಿಗೆ ಸಮರ್ಪಕವಾಗಿ ನೀರು ಪೂರೈಸುವ ನಿಟ್ಟಿನಲ್ಲಿ ಜಲಮಂಡಳಿಯಿಂದ ಕೊಳವೆ ಬಾವಿ ಕೊರೆಸಲಾಗಿದೆ. ಸಾರ್ವಜನಿಕರು ಈ ಕೊಳವೆ ಬಾವಿ ಗಳನ್ನು ಸದ್ಬಳಕೆ ಮಾಡಿಕೊಳ್ಳಬಹುದು. ಬೆಂಗಳೂರಿಗರ ನೀರಿನ ಸಮಸ್ಯೆ ಪರಿಹರಿಸಲು ಜಲಮಂಡಳಿಯು ಸಿದ್ಧವಾಗಿದೆ. ●ಡಾ|ವಿ.ರಾಮ್‌ ಪ್ರಸಾತ್‌ ಮನೋಹರ್‌, ಅಧ್ಯಕ್ಷ, ಜಲಮಂಡಳಿ

■ ಅವಿನಾಶ ಮೂಡಂಬಿಕಾನ

Advertisement

Udayavani is now on Telegram. Click here to join our channel and stay updated with the latest news.

Next