Advertisement

ಆಂಧ್ರ ಪ್ರದೇಶ : ರಕ್ತಚಂದನ ಮರಕಡಿವ 80 ಶಂಕಿತರ ಬಂಧನ

11:28 AM Mar 02, 2018 | Team Udayavani |

ತಿರುಪತಿ : ಆಂಧ್ರ ಪ್ರದೇಶ ಪೊಲೀಸರು ಇಲ್ಲಿ 80 ಕಿ.ಮೀ ದೂರದಲ್ಲಿರುವ ಆಂಜನೇಯಪುರನಲ್ಲಿ ತಮಿಳು ನಾಡಿನ ಸುಮಾರು 80 ಮಂದಿ ರಕ್ತಚಂದನ ಮರ ಕಡಿಯುವ ಶಂಕಿತರನ್ನು ಬಂಧಿಸಿದ್ದಾರೆ. 

Advertisement

ತಮಿಳು ನಾಡಿನ ಆರ್‌ಕಾಟ್‌ನಿಂದ ಲಾರಿಗಳಲ್ಲಿ  ಅರಣ್ಯಕ್ಕೆ ತೆರಳುತ್ತಿದ್ದ ಈ ಶಂಕಿತರನ್ನು ನಸುಕಿನ 2 ಗಂಟೆಯ ವೇಳೆಗೆ ಆಂಜನೇಯಪುರಂ ನಲ್ಲಿ ಸೆರೆ ಹಿಡಿಯಲಾಯಿತೆಂದು ರಕ್ತಚಂದನ ಕಳ್ಳಸಾಗಣೆ ನಿಗ್ರಹ ತಂಡದ ಮೂಲಗಳು ತಿಳಿಸಿವೆ. 

ಬಂಧಿತರಲ್ಲಿ ಮೂವರು ಕಾಲೇಜು ವಿದ್ಯಾರ್ಥಿಗಳೆಂದು ತಿಳಿದುಬಂದಿದೆ. ಸುಮಾರು 80 ಮಂದಿ ರಕ್ತಚಂದನ ಮರ ಕಡಿಯುವ ಶಂಕಿತರು ಆಂಧ್ರಪ್ರದೇಶದ ಶೇಷಾಚಲಂ ಮಾರ್ಗವಾಗಿ ಆಂಜನೇಯಪುರಂ ಅರಣ್ಯಕ್ಕೆ ಲಾರಿಗಳಲ್ಲಿ ಸಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರಕಿದ ಪ್ರಕಾರ ಕಾರ್ಯಾಚರಣೆ ನಡೆಸಿ ಬಂಧನಸತ್ರ ನಡೆಸಲಾಯಿತು ಎಂದು ಮೂಲಗಳು ಹೇಳಿವೆ. 

Advertisement

Udayavani is now on Telegram. Click here to join our channel and stay updated with the latest news.

Next