Advertisement

ಕರ್ತಾರ್ಪುರ ಯಾತ್ರಿಕರ ಅನುಕೂಲಕ್ಕೆ 80 ವಲಸೆ ಕೌಂಟರ್‌

09:45 AM Oct 29, 2019 | Team Udayavani |

ಲಾಹೋರ್‌: ಕರ್ತಾರ್ಪುರ ಕಾರಿಡಾರ್‌ಗೆ ಭಾರೀ ಸಂಖ್ಯೆಯಲ್ಲಿ ಯಾತ್ರಿಗಳು ಭೇಟಿ ನೀಡುವ ನಿರೀಕ್ಷೆಯಿರುವ ಕಾರಣ, ಅವರಿಗೆ ಅನುಮತಿ ನೀಡುವ ಪ್ರಕ್ರಿಯೆಯನ್ನು ಕ್ಷಿಪ್ರವಾಗಿ ಹಾಗೂ ಸರಾಗವಾಗಿ ಮಾಡಲು ಅನುಕೂಲವಾಗುವಂತೆ 80 ವಲಸೆ ಕೌಂಟರ್‌ಗಳನ್ನು ತೆರೆಯುವುದಾಗಿ ಪಾಕಿಸ್ತಾನ ಸರ್ಕಾರ ಘೋಷಿಸಿದೆ.

Advertisement

ಕಳೆದ ವಾರವಷ್ಟೇ ಭಾರತ ಮತ್ತು ಪಾಕ್‌ ನಡುವೆ ಕರ್ತಾರ್ಪುರ ಕಾರಿಡಾರ್‌ಗೆ ಸಂಬಂಧಿಸಿದ ಒಪ್ಪಂದ ನಡೆದಿದೆ. ಕರ್ತಾರ್ಪುರದಲ್ಲಿನ ಗುರುದ್ವಾರ ದರ್ಬಾರ್‌ ಸಾಹಿಬ್‌ಗ ಪ್ರತಿ ದಿನ 5 ಸಾವಿರ ಭಾರತೀಯ ಯಾತ್ರಿಕರಿಗೆ ಆಗಮಿಸಲು ಅವಕಾಶ ಕಲ್ಪಿಸಲಾಗುತ್ತದೆ. ಯಾತ್ರಿಕರಿಗೆ ಅನುಮತಿ ನೀಡುವ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಮುಗಿಸಲು 80 ವಲಸೆ ಕೌಂಟರ್‌ಗಳನ್ನು ಹಾಗೂ ದರ್ಬಾರ್‌ ಸಾಹಿಬ್‌ನಿಂದ 4 ಕಿ.ಮೀ. ದೂರದಲ್ಲಿ ವಲಸೆ ಹಾಲ್‌ವೊಂದನ್ನು ತೆರೆಯಲು ನಿರ್ಧರಿಸಲಾಗಿದೆ.

ನಗರ್‌ ಕೀರ್ತನೆ ಆರಂಭ:
ಭಾರತದ ಸಿಖ್‌ ಭಕ್ತರ ಒಂದು ಸಮೂಹವು ಸೋಮವಾರವೇ ನವದೆಹಲಿಯಿಂದ ಪಾಕ್‌ನ ನನ್‌ಕಾನಾ ಸಾಹಿಬ್‌ಗ ಧಾರ್ಮಿಕ ಮೆರವಣಿಗೆ ಆರಂಭಿಸಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದು, ಈ ಮೆರವಣಿಗೆಗೆ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಕ್‌ನ ಪ್ರಭಾರ ಹೈಕಮಿಷನರ್‌ ಸೈಯದ್‌ ಹೈದರ್‌ ಶಾ ಪಾಲ್ಗೊಂಡಿದ್ದರು. ನಗರ ಕೀರ್ತನೆಯು ಲೂಧಿಯಾನಾ ಮತ್ತು ಅಮೃತಸರ ದಾಟಿ, ಅ.31ರಂದು ವಾಘಾ ಗಡಿ ಮೂಲಕ ಪಾಕಿಸ್ತಾನ ತಲುಪಲಿದೆ.

Advertisement

Udayavani is now on Telegram. Click here to join our channel and stay updated with the latest news.

Next