Advertisement

ಜಾರ್ಖಂಡ್‌: ಉಪವಾಸ ಸತ್ಯಾಗ್ರಹ; ನಿರಶನ ನಿರತ ಮತ್ತೊಬ್ಬ ಜೈನ ಸನ್ಯಾಸಿ ಜಿನೈಕ್ಯ

11:13 PM Jan 06, 2023 | Team Udayavani |

ಜೈಪುರ: ಜಾರ್ಖಂಡ್‌ನ‌ ಪರಸನಾಥ್‌ ಪರ್ವತ ಶ್ರೇಣಿಯ ಶ್ರೀ ಸಮ್ಮದ್‌ ಶಿಕರ್ಜಿಯನ್ನು ಪ್ರವಾಸಿ ತಾಣ ಎಂದು ಘೋಷಿಸಿದ್ದ ಜಾರ್ಖಂಡ್‌ ಸರ್ಕಾರದ ಕ್ರಮ ಖಂಡಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಮತ್ತೊಬ್ಬ ಜೈನ ಸನ್ಯಾಸಿ ಶುಕ್ರವಾರ ಜಿನೈಕ್ಯರಾಗಿದ್ದಾರೆ.

Advertisement

ರಾಜಸ್ಥಾನದ ಜೈಪುರದ ಸಂಗನೇರ್‌ ಪ್ರದೇಶದ ಸಂ ಜಿ ದೇಗುಲದಲ್ಲಿ ಕಳೆದ ಐದು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಮರ್ಥ ಸಾಗರ್‌(74) ಅವರು ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಜಿನೈಕ್ಯರಾಗಿದ್ದಾರೆ ಎಂದು ರಾಜಸ್ಥಾನ ಜೈನ ಸಭಾ ಅಧ್ಯಕ್ಷ ಸುಭಾಶ್‌ ಚಂದ್ರ ಜೈನ್‌ ತಿಳಿಸಿದ್ದಾರೆ.

ಇದೇ ವಿಚಾರವಾಗಿ ಉಪವಾಸ ಸತ್ಯಾಗ್ರಹ ನಿರತರಾಗಿದ್ದ ಜೈನ ಸನ್ಯಾಸಿ ಸುಗ್ಯೇಯಸಾಗರ ಮಹಾರಾಜ್‌(72) ಮಂಗಳವಾರ ಜಿನೈಕ್ಯರಾದರು.

ಜಾರ್ಖಂಡ್‌ ಸರ್ಕಾರದ ನಿಲುವು ಖಂಡಿಸಿ ದೇಶಾದ್ಯಂತ ಜೈನ ಸಮುದಾಯದವರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಗೆ ಮಣಿದ ಕೇಂದ್ರ ಸರ್ಕಾರವು, ಅನೇಕ ಜೈನ ಸನ್ಯಾಸಿಗಳು ತಪ್ಪಸ್ಸು ನಡೆಸಿದ್ದ ಸಮ್ಮದ್‌ ಶಿಕರ್ಜಿಯು ಪ್ರವಾಸಿ ತಾಣ ಅಲ್ಲ ಎಂದು ಗುರುವಾರ ಘೋಷಿಸಿತು.

Advertisement

Udayavani is now on Telegram. Click here to join our channel and stay updated with the latest news.

Next