Advertisement

ಕಲ್ಲೆಸೆದು ಕಳ್ಳರ ಓಡಿಸಿದ ವೃದ್ಧ

01:09 AM Jul 16, 2019 | Team Udayavani |

ಔರಂಗಾಬಾದ್‌: ಇಲ್ಲಿನ ಪಡೇಗಾಂವ್‌ ಪ್ರಾಂತ್ಯದ ಮಿಸ್ಬಾ ಕಾಲನಿಯಲ್ಲಿದ್ದ ಎಟಿಎಂ ಯಂತ್ರವನ್ನು ದೋಚಲು ಬಂದಿದ್ದ ಕಳ್ಳರ ತಂಡವೊಂದನ್ನು 73 ವರ್ಷದ ವೃದ್ಧರೊ ಬ್ಬರು ಏಕಾಂಗಿಯಾಗಿ ಓಡಿಸಿರುವ ಘಟನೆ ಭಾನುವಾರ ನಸುಕಿನಲ್ಲಿ ನಡೆದಿದೆ.

Advertisement

ಎಟಿಎಂ ದೋಚಲು ಬಂದಿದ್ದ ಕಳ್ಳರು, ಗ್ಯಾಸ್‌ ಕಟರ್‌ನಿಂದ ಮಷೀನ್‌ನ ಹೊರ ಹೊದಿಕೆ ಕತ್ತರಿಸಿದಾಗ ಸದ್ದಾಗಿದೆ. ಆಗ ಹತ್ತಿರದ ಕಟ್ಟಡವೊಂದರ ವಾಚ್‌ಮನ್‌ ಶೇಖ್‌ ಸಮದ್‌ ಅಹ್ಮದ್‌ (73) ಎಚ್ಚರಗೊಂಡಿದ್ದು ಕಳ್ಳತನ ಅರಿವಿಗೆ ಬಂದಿದೆ. ತಕ್ಷಣವೇ 100 ಸಂಖ್ಯೆಗೆ ಡಯಲ್‌ ಮಾಡಿದ್ದಾರೆ. ಪಕ್ಕದವರನ್ನು ಎಬ್ಬಿಸಲು ಯತ್ನಿಸಿದ್ದಾರೆ. ಆದರೆ, ಪ್ರಯೋಜನವಾಗಿಲ್ಲ.

ಆಗ, ತಾವಿದ್ದ ಕಟ್ಟಡದ ಬಾಲ್ಕನಿ ಯಿಂದಲೇ ಕಳ್ಳರ ಮೇಲೆ ಕಲ್ಲು ಎಸೆಯಲು ಆರಂಭಿಸಿದ್ದಾರೆ. ಇದರಿಂದ ಗಲಿಬಿಲಿಗೊಂಡ ಕಳ್ಳರು, ತಮ್ಮ ಕೆಲಸ ಅಲ್ಲಿಗೇ ಬಿಟ್ಟು ಪರಾರಿಯಾಗಿದ್ದಾರೆ. ಇದರಿಂದ ಎಟಿಎಂನಲ್ಲಿದ್ದ 25.41 ಲಕ್ಷ ರೂ. ಕಳ್ಳರ ಪಾಲಾಗುವುದು ತಪ್ಪಿದೆ.

Advertisement

Udayavani is now on Telegram. Click here to join our channel and stay updated with the latest news.

Next