Advertisement

14ನೇ ವಿಧಾನಸಭೆಯಲ್ಲಿ ಅಗಲಿದ 7 ಶಾಸಕರು!

06:10 AM Feb 20, 2018 | Team Udayavani |

ಬೆಂಗಳೂರು : ಪ್ರಸ್ತುತ ಅಸ್ಥಿತ್ವದಲ್ಲಿರುವ 14 ನೇ ವಿಧಾನಸಭೆಯಲ್ಲಿ ಒಬ್ಬರಲ್ಲ,ಇಬ್ಬರಲ್ಲ …ಇಲ್ಲಿಯವರೆಗೆ
ಒಟ್ಟು 7 ಜನ ಹಾಲಿ ಶಾಸಕರು ಅಸುನೀಗಿದ್ದಾರೆ…!

Advertisement

ಮಾಜಿ ಸಚಿವರಾದ ಬೀದರ್‌ ಉತ್ತರ ಕ್ಷೇತ್ರದ ಶಾಸಕ ಗುರುಪಾದಪ್ಪ ನಾಗಮಾರಪಳ್ಳಿ, ಬೆಂಗಳೂರಿನ ಹೆಬ್ಟಾಳ
ಶಾಸಕ ಜಗದೀಶ್‌, ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಖಮರುಲ್ಲ ಇಸ್ಲಾಂ, ದೇವದುರ್ಗ ಶಾಸಕ ವೆಂಕಟೇಶ್‌ ನಾಯಕ್‌, ಸಹಕಾರ ಮತ್ತು ಸಕ್ಕರೆ ಸಚಿವರಾಗಿದ್ದ ಗುಂಡ್ಲುಪೇಟೆ ಶಾಸಕ ಎಚ್‌.ಎಸ್‌.ಮಹದೇವಪ್ರಸಾದ್‌,
ಎಚ್‌.ಡಿ .ಕೋಟೆ ಶಾಸಕ ಚಿಕ್ಕಮಾದು, ಮೇಲುಕೋಟೆ ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಅಗಲಿದವರು. ಇವರಲ್ಲಿ
ದೇವದುರ್ಗ ಶಾಸಕ ಅಪಘಾತದಲ್ಲಿ ಮೃತಪಟ್ಟರೆ, ಉಳಿದವರೆಲ್ಲರೂ ಅನಾರೋಗ್ಯ ಮತ್ತು ಹೃದಯಾಘಾತದಿಂದ ನಿಧನರಾಗಿದ್ದಾರೆ. ಶಾಸಕರಾಗಿದ್ದ ಖಮರುಲ್ಲ ಇಸ್ಲಾಂ, ಇತ್ತೀಚೆಗೆ ನಿಧನರಾಗಿದ್ದ ಚಿಕ್ಕಮಾದು ಮತ್ತು ಪುಟ್ಟಣ್ಣಯ್ಯನವರ ಕ್ಷೇತ್ರ ಹೊರತುಪಡಿಸಿದರೆ ಉಳಿದೆಲ್ಲಾ ಕ್ಷೇತ್ರಗಳಿಗೂ ಉಪ ಚುನಾವಣೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next