Advertisement

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

10:11 PM Oct 05, 2024 | Team Udayavani |

ಶಿಲ್ಲಾಂಗ್:ಭಾರೀ ಮಳೆಯಿಂದಾಗಿ ಮೇಘಾಲಯದ ದಕ್ಷಿಣ ಗಾರೋ ಹಿಲ್ಸ್‌ನ ಹತಿಯಾಸಿಯಾ ಸಾಂಗ್ಮಾದಲ್ಲಿ ವಿನಾಶಕಾರಿ ಭೂಕುಸಿತ ಸಂಭವಿಸಿದ್ದು ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿಯಾಗಿದ್ದಾರೆ.

Advertisement

ಏಳು ಮಂದಿಯ ದೇಹಗಳನ್ನು ಹೊರ ತೆಗೆಯಲು ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ. ಎನ್ ಡಿಆರ್ ಎಫ್ ಸೇರಿ ರಕ್ಷಣಾ ತಂಡಗಳು, ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಶುಕ್ರವಾರ ತಡವಾಗಿ ಆರಂಭವಾದ ನಿರಂತರ ಮಳೆಯು ಗಾರೋ ಪ್ರದೇಶದಾದ್ಯಂತ ವ್ಯಾಪಕ ಭೂಕುಸಿತಗಳು ಮತ್ತು ಹಠಾತ್ ಪ್ರವಾಹಗಳನ್ನು ಉಂಟುಮಾಡಿದೆ.   ಪರಿಣಾಮವಾಗಿ ಒಟ್ಟು ಹತ್ತಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.ವ್ಯಾಪಕ ಹಾನಿ ಸಂಭವಿಸಿದೆ.

ಭೂಕುಸಿತದಲ್ಲಿ ಜೀವಂತ ಸಮಾಧಿಯಾಗಿರುವ ಕುಟುಂಬದ 7 ಸದಸ್ಯರ ಶವಗಳನ್ನು ಹೊರತೆಗೆಯಲು ದಕ್ಷಿಣ ಗರೋ ಹಿಲ್ಸ್‌ನ ಗಾಸುಪಾರಾ ಅಡಿಯಲ್ಲಿ ಹಟಿಯಾಸಿಯಾ ಸಾಂಗ್ಮಾದಲ್ಲಿ ಇನ್ನೂ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೇಘಾಲಯ ಸಿಎಂಒ ಕಚೇರಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next