Advertisement

ಕೋಡಿಕಲ್‌: 7 ಕೆ.ಜಿ. ಗಾಂಜಾ ಸಹಿತ ಮೂವರ ಸೆರೆ

10:35 AM Nov 10, 2018 | Team Udayavani |

ಮಂಗಳೂರು: ಉರ್ವ ಠಾಣಾ ವ್ಯಾಪ್ತಿಯ ಕೋಡಿಕಲ್‌ ಕ್ರಾಸ್‌ ಬಳಿ ಶುಕ್ರವಾರ ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರನ್ನು ಮಂಗಳೂರು ನಗರ ಕೇಂದ್ರ ಉಪವಿಭಾಗದ ರೌಡಿ ನಿಗ್ರಹ ದಳದ ಪೊಲೀಸರು ಬಂಧಿಸಿ 7.100 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

Advertisement

ಬೆಳಗಾವಿ ರಾಮದುರ್ಗಾ ತಾಲೂಕು ತೋರಣಗಟ್ಟಿ ಗ್ರಾಮದ ಮಾಯಮ್ಮನ ಗುಂಡಿ ಬಳಿಯ ನಿವಾಸಿ ಕರೆಪ್ಪ ಲಕ್ಷ್ಮಣ ಸುಣದೋಳಿ (50), ಬಿಜಾಪುರ ಮಾಸೆತ್ತಿ ಗಂಗಪ್ಪ ಪಡೆಪ್ಪ ಮಾದೆರ (39) ಹಾಗೂ ಗೋಕಾಕ್‌ ಕಾನಸಗೇರಿ ಗ್ರಾಮದ ಸಿದ್ದರಾಯಪ್ಪ ಕೂರಿ (36) ಬಂಧಿತರು. ವಿಜಯಪುರದಿಂದ ಕಾಸರಗೋಡು ಜಿಲ್ಲೆಗೆ ಗಾಂಜಾ ಮಾರಾಟ ಮಾಡಲು ತೆರಳುವ ವೇಳೆ ಅವರನ್ನು ವಶಕ್ಕೆ ಪಡೆಯಲಾಗಿದೆ. 

ಆರೋಪಿಗಳಿಂದ ಒಟ್ಟು 7.100 ಕೆ.ಜಿ ಗಾಂಜಾ, 3 ಮೊಬೈಲ್‌ ಫೋನ್‌, 2 ಮೋಟಾರ್‌ ಸೈಕಲ್‌ ಹಾಗೂ 315 ರೂ. ಸಹಿತ 3.13 ಲ. ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ.   ಉರ್ವ ಠಾಣೆಯಲ್ಲಿ ಎನ್‌. ಡಿ.ಪಿ.ಎಸ್‌. ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಕೇಂದ್ರ ರೌಡಿ ನಿಗ್ರಹದಳದ  ಇನ್‌ ಪೆಕ್ಟರ್‌ ರವೀಶ್‌ ಎಸ್‌. ನಾಯಕ್‌, ಸಿಬಂದಿ ವೆಲೆಂಟೀನ್‌ ಡಿ’ಸೋಜಾ, ಗಂಗಾಧರ್‌, ಸಂತೋಷ್‌ ಸಸಿಹಿತ್ಲು, ಕಿಶೋರ್‌, ಪ್ರಮೋದ್‌ ಕುಮಾರ್‌, ಬಸವರಾಜ್‌ ಮತ್ತು ಉರ್ವ ಎಸ್‌ಐ ವನಜಾಕ್ಷಿ  ಕೆ., ಸಿಬಂದಿ ಬಾಲಕೃಷ್ಣ ಕೆ., ಸಂತೋಷ್‌, ರವಿ ಡಿ., ವಿನೋದ್‌, ಯೋಗೀಶ್‌, ಹೇಮಂತ್‌ ಕುಮಾರ್‌, ಶಂಕರಪ್ಪ  ಅವರು ಕಾರ್ಯಾಚರಣೆ ನಡೆಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next