Advertisement

ವಿಧಾನಸಭೆ ಕಲಾಪ ಅನಿರ್ದಿಷ್ಟಾವಧಿ ಮುಂದೂಡಿಕೆ; 7 ದಿನ 36 ಗಂಟೆ ಚರ್ಚೆ

06:42 PM Feb 14, 2017 | Sharanya Alva |

ಬೆಂಗಳೂರು: ಕಳೆದ 7 ದಿನಗಳಿಂದ ನಡೆದ ವಿಧಾನಸಭೆಯ ಕಲಾಪವನ್ನು ಮಂಗಳವಾರ ಡೆಪ್ಯುಟಿ ಸ್ಪೀಕರ್ ಶಿವಶಂಕರ್ ರೆಡ್ಡಿ ಅನಿರ್ದಿಷ್ಟಾವಧಿಗೆ ಮುಂದೂಡಿದರು. 7 ದಿನಗಳ ವಿಧಾನಸಭೆ ಕಲಾಪದಲ್ಲಿ ಚರ್ಚೆ ನಡೆದಿದ್ದು ಕೇವಲ 36 ತಾಸು ಮಾತ್ರ.

Advertisement

ವಿಧಾನಮಂಡಲದ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ವಿಆರ್ ವಾಲಾ ಅವರು ಮಾತನಾಡಿದ್ದರು. ರಾಜ್ಯಪಾಲರ ಭಾಷಣದ ಮೇಲೆ 12ಗಂಟೆ 58 ನಿಮಿಷ ಚರ್ಚೆ ನಡೆದಿತ್ತು.

7 ದಿನಗಳ ಕಾಲ ನಡೆದ ವಿಧಾನಸಭೆ ಕಲಾಪದಲ್ಲಿ 66 ವಾರ್ಷಿಕ ವರದಿ ಮಂಡನೆಯಾಗಿದ್ದರೆ, ಒಂದು ಖಾಸಗಿ ನಿರ್ಣಯ ಸ್ವೀಕಾರ. 5 ಪ್ರಮುಖ ವಿಧೇಯಕ ಅಂಗೀಕಾರಗೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next