Advertisement

ನಿಲ್ಲುತ್ತಿಲ್ಲ ಅವಘಡ;ಹಳಿ ತಪ್ಪಿದ ಶಕ್ತಿಕುಂಜ್‌ ಎಕ್ಸ್‌ಪ್ರೆಸ್‌

09:17 AM Sep 07, 2017 | Team Udayavani |

ಲಕ್ನೋ: ದೇಶದಲ್ಲಿ ನಡೆಯುತ್ತಿರುವ ರೈಲು ಅವಘಡಗಳು ಮುಂದುವರಿದಿದ್ದು, ಗುರುವಾರ ಬೆಳಗ್ಗೆ ಉತ್ತರಪ್ರದೇಶದ ಸೋನ್‌ಭದ್ರಾದ ಓಬ್ರಾ ಬಳಿ ಹೌರಾ -ಜಬಲ್‌ಪುರ್‌ ನಡುವೆ ಸಂಚರಿಸುವ ಶಕ್ತಿಕುಂಜ್‌ ಎಕ್ಸ್‌ಪ್ರೆಸ್‌ ರೈಲಿನ 7 ಬೋಗಿಗಳು ಹಳಿ ತಪ್ಪಿವೆ. 

Advertisement

ಬೆಳಗ್ಗೆ 6.30 ರ ವೇಳೆಗೆ ಅವಘಡ ನಡೆದಿದ್ದು, ಇದುವರೆಗೆ ಯಾವುದೇ ಹಾನಿಯ ಬಗ್ಗೆ ವರದಿಯಾಗಿಲ್ಲ.  ಘಟನೆಯಿಂದ ಇತರ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. 

ಪ್ರಯಾಣಿಕರೆಲ್ಲರನ್ನು ಉಳಿದ ಬೋಗಿಗಳಲ್ಲಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದ್ದು ಯಾರೋಬ್ಬರು ಗಾಯಗೊಂಡಿಲ್ಲ ಎಂದು ರೈಲ್ವೇ ವಕ್ತಾರರು ತಿಳಿಸಿದ್ದಾರೆ. 

ಇದು ಕಳೆದ 20 ದಿನಗಳ ಒಳಗೆ ದೇಶದಲ್ಲಿಐ ನಡೆದ ನಾಲ್ಕನೇ ರೈಲು ಅವಘಡವಾಗಿದೆ. ಪಿಯೂಷ್‌ ಗೋಯಲ್‌ ಅವರು ರೈಲ್ವೇ ಸಚಿವರಾಗಿ ಅಧಿಕಾರ ಸ್ವೀಕರಿಸಿದ ವಾರದ ಒಳಗೆ ಅವಘಡ ನಡೆದಿರುವುದು ಚಿಂತೆಗೀಡುಮಾಡಿದೆ. ನಿರಂತರ ರೈಲು ಅವಘಡವಾದ ಹಿನ್ನಲೆಯಲ್ಲಿ ರೈಲ್ವೇ ಖಾತೆಯನ್ನು ಸುರೇಶ್‌ ಪ್ರಭು ಅವರಿಂದ ಬದಲಾವಣೆ ಮಾಡಿಕೊಳ್ಳಲಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next