Advertisement

ಎರಡೇ ದಿನದಲ್ಲಿ 645 ಜನ ಗುಣಮುಖ

02:57 PM Aug 24, 2020 | Suhan S |

ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್‌ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಶನಿವಾರ ಹಾಗೂ ರವಿವಾರ ಎರಡು ದಿನಗಳ ಅವಧಿಯಲ್ಲಿ 448 ಮಂದಿಗೆ ಸೋಂಕು ತಗುಲಿದೆ. ಇನ್ನೊಂದೆಡೆ 645 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Advertisement

ಶನಿವಾರ 312 ಹಾಗೂ ರವಿವಾರ 136 ಜನರಿಗೆ ಸೋಂಕು ತಗುಲಿದೆ. ಜತೆಗೆ ಕ್ರಮವಾಗಿ 511 ಹಾಗೂ 134 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಎರಡು ದಿನಗಳ ಅವಧಿಯಲ್ಲಿ ಐವರು ಕೋವಿಡ್‌ದಿಂದ ಬಲಿಯಾಗಿದ್ದಾರೆ. 136 ಹೊಸ ಪ್ರಕರಣಗಳಿಂದ 9943 ಸೋಂಕಿತರು ಆಗಿದ್ದು, ಇಲ್ಲಿಯವರೆಗೆ 5851 ಜನ ಗುಣಮುಖರಾಗಿ ಬಿಡುಗಡೆ ಆದಂತಾಗಿದೆ.

ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್‌ ವಾರ್ಡ್‌ನಲ್ಲಿ ಸದ್ಯ 3936 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಇಂದಿನವರೆಗೆ 78982 ಜನರ ಮೇಲೆ ನಿಗಾ ಇಡಲಾಗಿದೆ. ಇದುವರೆಗೆ 28355 ಜನರು 14 ದಿನಗಳ ಕಾಲ ಗೃಹ ನಿಗಾದಲ್ಲಿದ್ದರೆ, ಒಟ್ಟು 6081 ಜನರು 14 ದಿನಗಳ ಗೃಹ ನಿಗಾ ಪೂರ್ಣಗೊಳಿಸಿದ್ದರೆ, 40610 ಜನರು 28 ದಿನಗಳ ಗೃಹ ನಿಗಾ ಅವ ಧಿ ಮುಕ್ತಾಯಗೊಳಿಸಿದ್ದಾರೆ. ಇಂದಿನವರೆಗೆ 77686 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, 65271 ವರದಿ ನಕಾರಾತ್ಮಕವಾಗಿದೆ. ಇನ್ನೂ 1558 ಜನರ ವರದಿ ಬರುವುದು ಬಾಕಿ ಇದೆ. ಸೋಂಕಿನಿಂದ ಒಟ್ಟು 156 ಜನ ಬಲಿಯಾದಂತಾಗಿದೆ ಎಂದು ಜಿಲ್ಲಾ ವೈದ್ಯಕೀಯ ವರದಿ ತಿಳಿಸಿದೆ.

ಬೈಲಹೊಂಗಲ: ಸೋಂಕಿಗೆ ಇಬ್ಬರು ಬಲಿ : ಪಟ್ಟಣ 10 ಸೇರಿದಂತೆ ತಾಲೂಕಿನಲ್ಲಿ 14 ಕೋವಿಡ್‌ ಪ್ರಕರಣ ಕೇಸ್‌ ಕಂಡು ಬಂದಿದ್ದು ಇಬ್ಬರು ಮೃತರಾಗಿದ್ದಾರೆ. ಪಟ್ಟಣದ ವಿದ್ಯಾನಗರದ 72 ವರ್ಷದ ಮಹಿಳೆ, ಶಿವಾನಂದ ಭಾರತಿ ನಗರದ 3ನೆ ಕ್ರಾಸ್‌ 30, 25 ವರ್ಷದ ಯುವಕರು, ಸಾರ್ವಜನಿಕ ಆಸ್ಪತ್ರೆಯ 37 ವರ್ಷದ ಪುರುಷ, 32 ವರ್ಷದ ಮಹಿಳೆ, ಗುಂಡ್ಲುರು ಚಾಳದ 46 ವರ್ಷದ ಮಹಿಳೆ, ಶಿವಾನಂದ ಭಾರತಿ ನಗರದ 62 ವರ್ಷದ ಪುರುಷ, 57 ಮಹಿಳೆಗೆ ಸೋಂಕು ತಗುಲಿದೆ. ವಿನಾಯಕ ನಗರದ 58 ವರ್ಷದ ಪುರುಷ, ಬಸವ ನಗರದ 1ನೇ ಕ್ರಾಸಿನ 76 ವರ್ಷದ ಪುರುಷ ಸೋಂಕಿಗೆ ಮೃತಪಟ್ಟಿದ್ದಾರೆ. ಬೆಳವಡಿ, ಅಂಬಡಗಟ್ಟಿ, ಯರಗೊಪ್ಪ, ಹುಲಿಕಟ್ಟಿಯಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿವೆ. ಒಟ್ಟು 620 ಪ್ರಕರಣಗಳಲ್ಲಿ 135 ಸಕ್ರಿಯ ಪ್ರಕರಣಗಳಿವೆ. ರವಿವಾರ 13 ಜನ ಗುಣಮುಖರಾಗಿದ್ದಾರೆ ಎಂದು ತಾಲೂಕು ಆರೋಗ್ಯಾ ಧಿಕಾರಿ ಡಾ| ಎಸ್‌. ಎಸ್‌. ಸಿದ್ದನ್ನವರ ತಿಳಿಸಿದ್ದಾರೆ.

 ಕಾಗವಾಡ ತಾಲೂಕಲ್ಲಿ 83 ಜನರಿಗೆ ಸೋಂಕು : ತಾಲೂಕಿನಲ್ಲಿ ಶನಿವಾರ ಒಂದೇ ದಿನ 83 ಜನರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಸೋಂಕಿತರು ಕಾಗವಾಡ-41, ಜುಗೂಳ-24, ಐನಾಪುರ-9, ಶಿರಗುಪ್ಪಿ-4, ಉಗಾರ ಖುರ್ದ ಮತ್ತು ಲೋಕುರದಲ್ಲಿ ತಲಾ 2, ಉಗಾರ ಬುದ್ರುಕದಲ್ಲಿ ಓರ್ವನಲ್ಲಿ ಸೋಂಕು ಪತ್ತೆಯಾಗಿದೆ. ಬರೀ ಕಾಗವಾಡ ಒಂದೇ ಗ್ರಾಮದಲ್ಲಿ 41 ಸೋಂಕಿತರು ಕಂಡುಬಂದಿದ್ದು, ಎಲ್ಲ ಸೋಂಕಿತರನ್ನು ಹೋಂ ಐಸೋಲೇಶನ್‌ದಲ್ಲಿ ಇಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next