Advertisement

ಬೀದರ ಜಿಲ್ಲೆಗೆ 6,400 ಮನೆ ಮಂಜೂರು: ಸಚಿವ ಖಾಶೆಂಪುರ

07:05 AM Feb 04, 2019 | Team Udayavani |

ಬೀದರ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಾಜಪೇಯಿ ವಸತಿ ಯೋಜನೆ, ಅಂಬೇಡ್ಕರ ವಸತಿ ಯೋಜನೆ, ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಬೀದರ ಜಿಲ್ಲೆಗೆ 6,400 ಮನೆಗಳು ಮಂಜೂರಾಗಿವೆ ಎಂದು ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ ಹೇಳಿದರು. ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದಾಜು 320 ಕೋಟಿ ರೂ.ವೆಚ್ಚದಲ್ಲಿ ಬೀದರ ಹಾಗೂ ಬಾಸವಕಲ್ಯಾಣ ತಾಲೂಕುಗಳಲ್ಲಿ ಈ ಮನೆಗಳ ನಿರ್ಮಾಣವಾಗಲಿವೆ.

Advertisement

ಈಗಾಗಲೇ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆ.14 ಕೊನೆಯ ದಿನವಾಗಿದೆ ಎಂದು ಮಾಹಿತಿ ನೀಡಿದರು. ಸಚಿವ ರಹೀಂ ಖಾನ್‌, ಶಾಸಕ ಅರವಿಂದಕುಮಾರ ಅರಳಿ, ನಗರಸಭೆ ಅಧ್ಯಕ್ಷೆ ಶಾಲಿನಿರಾಜು ಚಿಂತಾಮಣಿ, ಡಿಸಿ ಡಾ| ಎಚ್.ಆರ್‌.ಮಹಾದೇವ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next