Advertisement

ಯಲ್ಲಾಪುರ ತಾಲೂಕಿನ ಶಿರ್ಲೇ ಫಾಲ್ಸ್ ವೀಕ್ಷಣೆಗೆ ತೆರಳಿ ನಾಪತ್ತೆಯಾಗಿದ್ದ 6 ಯುವಕರು ಪತ್ತೆ

03:18 PM Jul 23, 2021 | Team Udayavani |

ಹುಬ್ಬಳ್ಳಿ : ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಶಿರ್ಲೇ ಫಾಲ್ಸ್ ವೀಕ್ಷಣೆಗೆ ತೆರಳಿ, ಗುರುವಾರ ಕಾಣೆಯಾಗಿದ್ದ, ಇಲ್ಲಿನ ನವನಗರದ ಆರು ಯುವಕರು ಶುಕ್ರವಾರ ಪತ್ತೆಯಾಗಿದ್ದಾರೆ.

Advertisement

ನವವನಗರದ ಆಸೀಫ್ ಮಕಬುಲ್ ಸಾಬ್, ಅಹ್ಮದ್ ಸೈಯದ್ ಶೇಖ್, ಅಬತಾಬ್ ಸದ್ದಾಂ, ಮಾಬುಸಾಬ್ ಶಿರಹಟ್ಟಿ, ಶಾನು ಬಿಜಾಪುರ, ಇಮ್ತಿಯಾಜ್ ಮಿಲ್ಲಾನವರ ಫಾಲ್ಸ್  ವೀಕ್ಷಣೆಗೆ ತೆರಳಿ ಕಾಣೆಯಾಗಿದ್ದರು.

ಸ್ಥಳದಲ್ಲಿದ್ದ ವಾಹನ ಗಮನಿಸಿ ಸ್ಥಳಿಯರು ಕಾಣೆಯಾದವರು ಹುಬ್ಬಳ್ಳಿಯವರೆಂದು ಭಾವಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದರು.

ಹಡುಕಾಟ ಕೈಗೊಂಡಾಗ ಯುವಕರು ಅರಣ್ಯದಲ್ಲಿ  ಪತ್ತೆಯಾಗುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.

 

Advertisement

ಇಲ್ಲಿನ ನವನಗರದಿಂದ ಪ್ರವಾಸ ಸ್ಥಳ ನೋಡಲು ಬಂದಿದ್ದ ಆರು ಯುವಕರು ಗುರುವಾರದಿಂದ ನಾಪತ್ತೆಯಾಗಿದ್ದು, ಶುಕ್ರವಾರ ಪತ್ತೆಯಾಗಿದ್ದಾರೆ. ಯಲ್ಲಾಪುರ ತಾಲೂಕಿನಲ್ಲಿ ಬರುವ ಶಿರ್ಲೇ ಫಾಲ್ಸ್ ನೋಡಲು ಬಂದು ಅಲ್ಲಿಂದ ಕಣ್ಮರೆಯಾಗಿದ್ದರು. ಅಲ್ಲಿ ನಿಂತಿರುವ ವಾಹನಗಳನ್ನು ನೋಡಿ ಹುಬ್ಬಳ್ಳಿಯವರು ಎಂದು ಗುರುತಿಸಲಾಗಿತ್ತು. ಆದರೆ ಅವರುಗಳ ಮಾಹಿತಿ ಲಭ್ಯವಾಗಿರಲಿಲ್ಲ.‌

ಶುಕ್ರವಾರ ಯುವಕರು ಅರಣ್ಯದಲ್ಲಿ ಪತ್ತೆಯಾಗಿದ್ದು, ನವನಗರದ ಆಸೀಫ ಮಕಬುಲಸಾಬ ಡಾಲಾಯಿತ್, ಅಹ್ಮದ ಸೈಯ್ಯದ ಶೇಖ, ಅಬತಾಬ್ ಸದ್ದಾಂ ಶಿರಹಟ್ಟಿ, ಮಾಬುಸಾಬ ಮಕಬುಲಸಾಬ ಶಿರಹಟ್ಟಿ, ಶಾನು ಬಿಜಾಪುರಿ ಹಾಗೂ ಇಮ್ತಿಯಾಜ್ ನೀರಸಾಬ ಮುಲ್ಲಾನವರ ಎಂದು ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next