Advertisement

ಜೀವಂತ ದಹನವಾದ 6ರ ಬಾಲಕಿ

06:00 AM Jun 16, 2018 | Team Udayavani |

ಚಿಕ್ಕನಾಯಕನಹಳ್ಳಿ: ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಬಳಿಯ ಯೋಗಮಾಧವ ನಗರದಲ್ಲಿ ಗುರುವಾರ ಮಧ್ಯರಾತ್ರಿ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ಬಿದ್ದು 6 ವರ್ಷದ ಬಾಲಕಿ ಸಜೀವ ದಹನವಾಗಿದ್ದಾಳೆ.

Advertisement

ಅನಿತಾ (6) ಮೃತ ಬಾಲಕಿ. ಇಲ್ಲಿ ಏಳೆಂಟು ಹಕ್ಕಿ ಪಿಕ್ಕಿ ಕುಟುಂಬಗಳಿದ್ದವು . ಗುರುವಾರ ರಾತ್ರಿ ಹತ್ತು ಗಂಟೆಯ ಸಮಯದಲ್ಲಿ ಗುಡಿಸಲಿಗೆ ಬೆಂಕಿ ಹೊತ್ತಿಕೊಂಡು  ಉರಿಯಲಾರಂಭಿಸಿತು. ತತ್‌ಕ್ಷಣ ಗುಡಿಸಲಿನಲ್ಲಿದ್ದವರು ಹೊರ ಬಂದು ಬೆಂಕಿ ನಂದಿಸಲು ಮುಂದಾದರು. ಮತ್ತೆ ಕೆಲವರು ಸಾಮಗ್ರಿಗಳ ರಕ್ಷಣೆಗೆ ಮುಂದಾದರು. ಈ ನಡುವೆ ಗುಡಿಸಲಲ್ಲಿ ಮಲಗಿದ್ದ  ಅನಿತಾ, ಅಗ್ನಿಜ್ವಾಲೆಗೆ ಸಿಲುಕಿ ಸುಟ್ಟು ಕರಕಲಾದಳು. ಬಾಲಕಿಯನ್ನು ರಕ್ಷಿಸಲು ಮುಂದಾದ ಬಾಲಕಿಯ ತಂದೆ ಲಕ್ಷ್ಮಣಯ್ಯ, ತಾಯಿ ಬೇಬಿಗೆ ಸುಟ್ಟ ಗಾಯಗಳಾಗಿವೆ. ಅಗ್ನಿಶಾಮಕ ದಳ ಬರುವಷ್ಟರಲ್ಲಿ ಎರಡು ಗುಡಿಸಲುಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಉಳಿದ ಆರು ಗುಡಿಸಲುಗಳಿಗೆ ತಗುಲಿದ್ದ ಬೆಂಕಿಯನ್ನು ನಂದಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next