Advertisement

ಮುದ್ದೇಬಿಹಾಳ: ಬಟ್ಟೆ ತೊಳೆಯಲು ತಂದೆಯೊಂದಿಗೆ ಹೋಗಿದ್ದ ಬಾಲಕ ಕಾಲುವೆಯಲ್ಲಿ ಮುಳುಗಿ ಸಾವು

12:03 PM Apr 02, 2022 | Team Udayavani |

ಮುದ್ದೇಬಿಹಾಳ: ತಂದೆಯೊಂದಿಗೆ ಬಟ್ಟೆ ತೊಳೆಯಲು ಹೋಗಿದ್ದ ಆರು ವರ್ಷದ ಬಾಲಕ ನೀರುಪಾಲಾದ ಘಟನೆ ತಾಲೂಕಿನ ಮಹಿಬೂಬನಗರ ಹೊರವಲಯದ ಶಿರೋಳ ಬಳಿಯ ಚಿಮ್ಮಲಗಿ ಏತ ನೀರಾವರಿ ಮುಖ್ಯ ಕಾಲುವೆಯಲ್ಲಿ ನಡೆದಿದೆ.

Advertisement

ಮೃತ ಬಾಲಕನನ್ನು ಮುದ್ದೇಬಿಹಾಳ ಪಟ್ಟಣದ ಮಹಿಬೂಬ ನಗರ ನಿವಾಸಿ  ರಿಜ್ವಾನ್ ಅಲ್ಲಾಭಕ್ಷ ತಾರಾಘರ (6) ಎಂದು ಗುರುತಿಸಲಾಗಿದೆ.

ಶುಕ್ರವಾರ ಸಂಜೆ ಬಾಲಕ ಕಾಲುಜಾರಿ ನೀರಲ್ಲಿ ಬಿದ್ದು ನೀರಿನ ಸೆಳವಿನೊಂದಿಗೆ ಕೊಚ್ಚಿಕೊಂಡು ಹೋಗಿದ್ದ. ಸಂಜೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರೊಂದಿಗೆ ಹುಡುಕಾಟ ನಡೆಸಿದ್ದರೂ ಶವ ಸಿಕ್ಕಿರಲಿಲ್ಲ. ಶನಿವಾರ ಬೆಳಿಗ್ಗೆ 10 ಗಂಟೆಯ ಸುಮಾರಿಗೆ ಶವ ತಾನಾಗೆ ನೀರಿನ ಮೇಲೆ ತೇಲತೊಡಗಿದಾಗ ಸ್ಥಳೀಯರು ಗುರುತಿಸಿ ಅಗ್ನಿಶಾಮಕ ಸಿಬ್ಬಂದಿಗೆ ದೂರವಾಣಿ ಮೂಲಕ ತಿಳಿಸಿದ್ದು,  ನಂತರ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಮಗುವನ್ನು ಮೇಲಕ್ಕೆ ತರಲಾಗಿದೆ.

ಸ್ಥಳಕ್ಕೆ ಆಗಮಿಸಿದ ಮುದ್ದೇಬಿಹಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ಕಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next