Advertisement

ವಾಯವ್ಯ ಪಾಕಿಸ್ಥಾನದಲ್ಲಿ ವಾಹನ ಪ್ರಪಾತಕ್ಕೆ ಬಿದ್ದು ಆರು ಮಂದಿ ಸಾವು

11:37 AM Aug 03, 2018 | udayavani editorial |

ಪೇಶಾವರ : ವಾಯವ್ಯ ಪಾಕಿಸ್ಥಾನದ ಪರ್ವತ ಪ್ರಾಂತ್ಯದ ಅಬೋಟಾಬಾದ್‌ ಜಿಲ್ಲೆಯ ಥಾಂಡಯಾನಿ ಎಂಬಲ್ಲಿ ವಾಹನವೊಂದು ಆಳವಾದ ಕಮರಿಗೆ ಉರುಳಿ ಬಿದ್ದ ದುರಂತದಲ್ಲಿ  ಒಂದೇ ಕುಟುಂಬದ ಐವರು ಸೇರಿದಂತೆ ಒಟ್ಟು ಆರು ಮಂದಿ ಮೃತಪಟ್ಟ ಘಟನೆ ವರದಿಯಾಗಿದೆ. 

Advertisement

ವಾಹನದಲ್ಲಿದ್ದವರು ರಾವಲ್ಪಿಂಡಿಯಲ್ಲಿ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಅಲ್ಲಿಂದ ಥಾಂಡಯಾನಿಗೆ ಮರಳುತ್ತಿದ್ದರು.  ಕಳಪೆ ರಸ್ತೆಯ ಕಾರಣ ಚಾಲಕನ ನಿಯಂತ್ರಣ ತಪ್ಪಿದ ವಾಹನ ಆಳವಾದ ಕಮರಿಗೆ ಉರುಳಿ ಬಿದ್ದು ಭೀಕರ ಅವಘಡ ಸಂಭವಿಸಿ ಆರು ಜೀವಗಳು ಬಲಿಯಾದವು ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next