Advertisement

ಉಳ್ಳಾಲ: ಮುಂದುವರಿದ ಕಡಲ್ಕೊರೆತ

10:10 AM Jun 14, 2019 | keerthan |

ಉಳ್ಳಾಲ: ಉಳ್ಳಾಲ ಮತ್ತು ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರ ಕೊರೆತ ಯಥಾಸ್ಥಿತಿಯಲ್ಲಿ ಮುಂದುವರಿದಿದ್ದು, ಕಿಲೇರಿಯಾ ನಗರದಲ್ಲಿ ಐದು ಮನೆಗಳು ಸಮುದ್ರ ಪಾಲಾದರೆ, 49 ಮನೆಗಳನ್ನು ಅಪಾಯದಂಚಿನಲ್ಲಿರುವವು ಎಂದು ಗುರುತಿಸಲಾಗಿದೆ. ಸೊಮೇಶ್ವರದಲ್ಲೂ 7 ಮನೆಗಳನ್ನು ಗುರುತಿಸಲಾಗಿದೆ.

Advertisement

ಉಳ್ಳಾಲ ಕಿಲೇರಿಯಾ ನಗರದಲ್ಲಿ ಹಮೀದ್‌, ಬದ್ರುನ್ನೀಸಾ, ಖತಿಜಮ್ಮ, ಸೆಬಿನಾ ಮತ್ತು ಜೈನಾಬ್‌ ಅವರ ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. ಕೈಕೋ, ಕಿಲೇರಿಯಾ ನಗರ, ಮೊಗವೀರಪಟ್ನ, ಸಿಗ್ರೌಂಡ್‌ ಸೇರಿದಂತೆ 49 ಮನೆಗಳು ಮತ್ತು ಎರಡು ಮಸೀದಿಗಳು ಅಪಾಯದಂಚಿನಲ್ಲಿವೆ. ಸಮ್ಮರ್‌ ಸ್ಯಾಂಡ್‌ ಬೀಚ್‌ ರೆಸಾರ್ಟ್‌ಗೆ ಸೇರಿದ್ದ ಶೌಚಾಲಯ ಕಟ್ಟಡ ಸಮುದ್ರ ಪಾಲಾಗಿದೆ.

ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರದ ಕೊರೆತ ಹೆಚ್ಚಿದ್ದು, 7 ಮನೆಗಳು ಅಪಾಯದಂಚಿನಲ್ಲಿವೆ. ಉಚ್ಚಿಲ ಮತ್ತು ಸೋಮೇಶ್ವರದ ಉದ್ದಕ್ಕೂ ಸಮುದ್ರ ತಟದಲ್ಲಿದ್ದ ಮರಗಳು ಸಂಪೂರ್ಣ ಸಮುದ್ರಪಾಲಾಗಿವೆ. ಸಂಸದ ನಳಿನ್‌ ಕುಮಾರ್‌ ಕಟೀಲು, ಕಮಿಷನರ್‌ ಸಂದೀಪ್‌ ಪಾಟೀಲ್‌ ಸ್ಥಳಕ್ಕೆ ಭೇಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next