Advertisement

ಕಾರಿನಲ್ಲಿ ಸಾಗಾಟ ಮಾಡಲಾಗುತ್ತಿದ್ದ 50 ಕೆ.ಜಿ ಗಾಂಜಾ ವಶ: ಆರೋಪಿ ಬಂಧನ

11:22 AM Oct 02, 2020 | Mithun PG |

ಬೀದರ್: ಕಾರಿನಲ್ಲಿ ಗಾಂಜಾ ಸಾಗಾಣಿಕೆ ಮಾಡುತ್ತಿದ್ದ ವೇಳೆ ತ್ವರಿತ ಕಾರ್ಯಾಚರಣೆ ನಡೆಸಿದ ಪೊಲೀಸರು, ಓರ್ವ ವ್ಯಕ್ತಿಯನ್ನು ಬಂಧಿಸಿ, ಸುಮಾರು 5 ಲಕ್ಷ ಮೌಲ್ಯದ 50 ಕೆ.ಜಿ ಗಾಂಜಾ ಮತ್ತು 10 ಲಕ್ಷ ರೂ. ಗಳ ಕಾರನ್ನು ವಶಕ್ಕೆ ಪಡೆದಿದ್ದಾರೆ.

Advertisement

ತಾಲೂಕಿನ ಬೀದರ್-ವಡಗಾಂವ ಮುಖ್ಯ ರಸ್ತೆಯ ನವಲಾಸಪೂರ ಕ್ರಾಸ್ ಬಳಿ ಸ್ವಿಫ್ಟ್ ಕಾರಿನಲ್ಲಿ ಗಾಂಜಾ ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಪಡೆದ ಜನವಾಡಾ ಠಾಣೆಯ ಪೊಲೀಸರು ದಾಳಿ ನಡೆಸಿದ ಆರೋಪಿಯನ್ನು ಬಂಧಿಸಿದ್ದಾರೆ.

ತೆಲಂಗಾಣಾದ ದಬಕುಂಟಾ ತಾಂಡಾದ ದೇವಿದಾಸ ಲಕ್ಷ್ಮಣ ರಾಠೋಡ (28) ಬಂಧಿತ ಆರೋಪಿ. ತೆಲಂಗಾಣಾದ ಸಂಗಾರೆಡ್ಡಿ ಕಡೆಯಿಂದ ಜಿಲ್ಲೆಯ ನವಲಾಸಪೂರ ಮುಖಾಂತರ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಿಸುತ್ತಿದ್ದ ವೇಳೆ ಈ ಕುರಿತು ಖಚಿತ ಮಾಹಿತಿ ಪಡೆದ  ಪೊಲೀಸರು ದಾಳಿ ನಡೆಸಿದ್ದಾರೆ.

ಪಿಎಸ್‌ಐ ಶಿವರಾಜ ಪಾಟೀಲ, ಸಿಬ್ಬಂದಿಗಳಾದ ರಾಜು, ರವೀಂದ್ರ ಸಪಾಟೆ, ಪ್ರಭಾಕರ, ಬಾಬುಶೆಟ್ಟಿ, ಇಸ್ಮಾಯಿಲ್ ಮತ್ತು ಚಾಲಕ ಪ್ರಭಾಕರ ದಾಳಿ ನಡೆಸಿದ್ದಾರೆ. ಘಟನೆ ಕುರಿತು ಜನವಾಠಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next